ಕುಷ್ಟಗಿ,ಜನವರಿ,18 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕುಷ್ಟಗಿ, ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕಿಯರ ನೇತೃತ್ವದಲ್ಲಿ ಆನೆ ಕಾಲು ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿನ್ನೆ ರಾತ್ರಿ ೧೦.೩೦ ಕ್ಕೆ ವಾರ್ಡ ನಂಬರ ೧೯ ರಲ್ಲಿ ರಕ್ತ ತಪಾಸಣೆ ನೆಡೆಸಿದರು.
![](http://www.kannadanadunews.in/wp-content/uploads/2022/01/WhatsApp-Image-2022-01-18-at-4.09.22-PM-1024x484.jpeg)
ಈ ತಪಾಸಣೆ ನೆಡೆಸುವ ವೇಳೆ ವಾರ್ಡ ನಿವಾಸಿಗಳು ರಕ್ತ ತಪಾಸಣೆಗೆ ಕೈ ಜೊಡಿಸಿದರು. ಇದೇ ಸಂದರ್ಭದಲ್ಲಿ ರಾತ್ರಿ ವೇಳೆ ಸುಮಾರು ೧೫೦ ಕ್ಕು ಹೆಚ್ಚು ಮಂದಿಗೆ ತಪಾಸಣೆ ನೆಡೆಸಿ ಆನೆ ಕಾಲು ರೋಗ ರೋಗದ ಲಕ್ಷಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಶುದ್ಧ ಕುಡಿಯುವ ನೀರು ಮತ್ತು ಸ್ವಚ್ಚತೆ ಕಾಡಿಕೊಳ್ಳುವಂತೆ ಜನರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಶಿವಲಿಂಗಮ್ಮ ಹಿರೇಮಠ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಾಯಕಿಯರು ವಾರ್ಡ ನಿವಾಸಿಗಳು ಉಪಸ್ಥಿತರಿದ್ದರು.
![](http://www.kannadanadunews.in/wp-content/uploads/2022/01/WhatsApp-Image-2022-01-18-at-4.09.23-PM-1024x484.jpeg)