ಬಳ್ಳಾರಿ : ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನ ದಿನವಾದ್ದರಿಂದ ಧ್ವಜಾರೋಹಣಕ್ಕೂ ಮುನ್ನ ಬಳ್ಳಾರಿಯ ತಮ್ಮ ನಿವಾಸದಲ್ಲಿ ಬಿಜೆಪಿಯ ಧ್ವಜವನ್ನು ಹಾರಿಸಿದ ಲಕ್ಷ್ಮೀ ಅರುಣಾ ಅವರು ಪಕ್ಷಕ್ಕೆ ಗೌರವ ಸೂಚಿಸಿದರು.
![](https://kannadanadunews.in/wp-content/uploads/2024/04/WhatsApp-Image-2024-04-06-at-08.49.22_ec7ad10a-1024x683.jpg)
ದೇಶದೆಲ್ಲೆಡೆ ಇಂದು ಬಿಜೆಪಿ ಕಾರ್ಯಾಲಯಗಳ ಅಲಂಕಾರದ ಜೊತೆಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಬಹಳ ಸಂಭ್ರಮದಿಂದ ಸಂಸ್ಥಾಪನಾ ದಿನಾಚರಣೆ ಆಚರಿಸುತ್ತಾರೆ. ಮನೆಗಳ ಮೇಲೆ ಪಕ್ಷದ ಧ್ವಜವನ್ನು ಹಾರಿಸಿ, ಪಕ್ಷದ ಇತಿಹಾಸ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಸಾಧನೆಗಳ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುತ್ತಾರೆ ಎಂದರು.
ವಿಶ್ವವೇ ಮೆಚ್ಚುವಂತೆ ಪಕ್ಷ ಸಂಘಟಿಸಿ ದೇಶವನ್ನು ಮುನ್ನಡೆಸುತ್ತಿರುವ ಪಕ್ಷದ ಎಲ್ಲಾ ನಾಯಕರು, ಮುಖಂಡರು, ಕಾರ್ಯಕರ್ತರಿಗೆ ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಎಂದು ಶುಭ ಹಾರೈಸಿದರು.
Facebook
Twitter
LinkedIn
Telegram
Email
Print
WhatsApp