ಸ್ವತಂತ್ರ ಅಭ್ಯರ್ಥಿಯಾಗಿ ಅರುಣ್ ಹಿರೇಹಳ್  ನಾಮಪತ್ರ ಸಲ್ಲಿಕೆ

 ಬಳ್ಳಾರಿ: ಜಿಲ್ಲಾ ಲೋಕಸಭಾ ಕ್ಷೆತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಅರುಣ್ ಹಿರೇಹಾಳ್ ಇಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ  ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ   ಅರುಣ್ ಹಿರೇಹಾಳ್  ಮಾಧ್ಯಮ ಜೊತೆ ಮಾತನಾಡಿ  ನಾನು ವೃತ್ತಿ ಯಿಂದ ಇಂಜಿನಿಯರ್ ಪದವೀಧರರಾಗಿದ್ದು    ಸಮಾಜಕ್ಕೆ ನನ್ನಿಂದ ಸಾಧ್ಯವಾಗುವ ಅಳಿಲು ಸೇವೆ ಮಾಡುವ ಸಲುವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ , ಎರಡು ರಾಷ್ಟ್ರೀಯ ಪಕ್ಷಗಳು  ದೇಶದ ನಾಗರಿಕರ ಹಿತ ವನ್ನು ಮರೆತು 2 ಪಕ್ಷಗಳು ವೈಯಕ್ತಿಕ  ಪ್ರತಿಷ್ಠೆಗೆ ಬಿದ್ದಿದ್ದಾವೇ ಇದರಿಂದ ದೇಶದ  ಜನರ ಅಗತ್ಯವಸ್ತುಗಳು ಬೆಲೆ ಏರಿಕೆಯಿಂದ  ಸಂಕಷ್ಟಕ್ಕೆ ಒಳಗಾಗಿದ್ದಾರೆ ಅದರಿಂದ ಸ್ವತಂತ್ರ ಅಭ್ಯರ್ಥಿಯಾಗಿ ರೈತರಿಗೆ ವಿದ್ಯಾಭ್ಯಾಸಕ್ಕಾಗಿ ಮತ್ತು ನಿರುದ್ಯೋಗ ಸಮಸ್ಯೆ  ಹೋಗಲಾಡಿಸಲು ಬಳ್ಳಾರಿ ಜಿಲ್ಲಾ ಅಭಿವೃದ್ಧಿಗಾಗಿ  ಸೇವೆ ಮಾಡಲು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದರು.

    ಈ ಸಂದರ್ಭದಲ್ಲಿ ಅಡ್ವಕೇಟ್ ಮೃತ್ಯುಂಜಯ  ರಾಘವೇಂದ್ರ ಪೂಜಾರ್ ರಾಮನಗೌಡ ಪಾಟೀಲ್ ಮೋಹನ್ ಗುಡಿಸಲು ಮನೆ  ಟಿ ಎಚ್ ತಳವಾರ್  ಕಾವ್ಯ ಹಿರೇಹಳ್ ರೈತ ಹೋರಾಟಗಾರ ಪರಶುರಾಮ್   ಸೇರಿದಂತ ಅನೇಕ ಜನರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top