ಬೆಂಗಳೂರು : ಹೈದ್ರಾಬಾದ್ ನ ಹೈಟೆಕ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ಮಾರ್ಚ್ 4 ರಿಂದ 6 ರ ವರೆಗೆ 50 ನೇ ಡೈರಿ ಇಂಡಸ್ಟ್ರಿ ಸಮ್ಮೇಳನ ನಡೆಯಲಿದ್ದು, ಡೈರಿ ವಲಯದಲ್ಲಿ ಇದು ಐತಿಹಾಸಿಕ ಸಮಾರಂಭವಾಗಿದೆ. ಈ ಮಹತ್ವದ ಸಮ್ಮೇಳನ ಉದ್ಘಾಟಿಸುವಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ವಿಧ್ಯುಕ್ತವಾಗಿ ಆಹ್ವಾನ ನೀಡಲಾಗಿದೆ.
ಇಂಡಿಯನ್ ಡೈರಿ ಸಂಘಟನೆಯ ದಕ್ಷಿಣ ವಲಯದ ಅಧ್ಯಕ್ಷ ಡಾ. ಸತೀಶ್ ಕುಮಾರ್, ತೆಲಂಗಾಣ ವಿಭಾಗದ ಅಧ್ಯಕ್ಷ ಡಾ. ಬಿ.ವಿ.ಕೆ ರೆಡ್ಡಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿತು.
ಈ ಸಮ್ಮೇಳನದಲ್ಲಿ ಭಾರತದಾದ್ಯಂತ ಮೂರು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತಿತರೆ ರಾಜ್ಯಗಳ ಪಶು ಸಂಗೋಪನಾ ಸಚಿವರು. ಉದ್ಯಮದಲ್ಲಿ ತೊಡಗಿರುವ ರೈತರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಮತ್ತಿತರೆ ಗಣ್ಯರು ಭಾಗವಹಿಸಲಿದ್ದಾರೆ. ಡೈರಿ ವಲಯದಲ್ಲಿನ ಇತ್ತೀಚಿನ ಬೆಳವಣಿಗೆಗಳು, ಸವಾಲುಗಳು, ಉದ್ಯೋಗಾವಕಾಶಗಳು, ಡೈರಿ ವಲಯದ ಸಾಮರ್ಥ್ಯ ಕುರಿತಂತೆ ಮಹತ್ವದ ಚರ್ಚೆ ನಡೆಯಲಿದೆ.