ಅಪಘಾತದಲ್ಲಿ ಕೈ ಕಳೆದುಕೊಂಡ ಯುವತಿಯ ಜೀವ ಉಳಿಸಿದ 108 ಸಿಬ್ಬಂದಿ

ಮರಿಯಮ್ಮನಹಳ್ಳಿ : ಬಲಗೈ ಕಳೆದುಕೊಂಡು ಸಾವು ನೋವಿನಲ್ಲಿ ನರಳುತಿದ್ದ ಯುವತಿಯ ಜೀವ ಉಳಿಸಿದ 108 ಸಿಬ್ಬಂದಿಗಳು. 

 

ಅನಾಮಧೇಯ ವಾಹನವೊಂದು ಪ್ರೇಮಿಗಳಿಬ್ಬರ ಮೇಲೆ ಹರಿದು ಯುವಕ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗಳಿ ತಾಂಡ ಹತ್ತಿರ ಘಟನೆ ನಡೆದಿದೆ. 

ಪ್ರೇಮಿಗಳು ಇಬ್ಬರು ಬೈಕ್ ನಲ್ಲಿ ತೆರಳುತ್ತಿದ್ದಾಗ ಯಾವುದೋ ಒಂದು ಅನಾಮಧೇಯ ವಾಹನವು ಬಂದು ಜೋರಾಗಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಹಗರಿಬೊಮ್ಮನಹಳ್ಳಿ ನಿವಾಸಿ ಕೋಟೆಶ್ (30) ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಮೆದುಳು ಹೊರಬಂದು ಸ್ಥಳದಲ್ಲಿಯೇ ಸಾವನ್ನಪ್ಪಿದಾನೆ. ಮಾಲವಿ ನಿವಾಸಿ ಜ್ಯೋತಿ(22) ಬಲಗೈ ಮುರಿದು ಸುಮಾರು 500 ಮೀಟರ್ ದೂರದಲ್ಲಿ ಕೈ ಬಿದ್ದಿತ್ತು. ಸ್ಥಳೀಯರು 108 ಗೆ ಕರೆ ಮಾಡಿದರು. ನಂತರ  ಸ್ವಲ್ಪ ಸಮಯಕ್ಕೆ ಘಟನಾ ಸ್ಥಳಕ್ಕೆ 108 ಅಂಬುಲೆನ್ಸ್ ಬಂದು ಗಾಯಾಳುವಿಗೆ ಚಿಕಿತ್ಸೆ ನೀಡಿ ರಕ್ತಸ್ರಾವ ವಾಗುವುದನ್ನು ಕಡಿಮೆ ಮಾಡಿ, ಆ ಯುವತಿಯ ಜೀವ ಉಳಿಸಿ ಆ ಹುಡುಗಿಗೆ ಧೈರ್ಯವನ್ನು ಹೇಳಿ ಸಮಾಧಾನ ಮಾಡಿದ ಸಿಬ್ಬಂದಿಗಳು ಇ.ಎಂ.ಟಿ.ಮಂಜುನಾಥ, ಚಾಲಕ ಮೈಬೂಬ್ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಚಿಗಟೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. 

ಸರ್ಕಾರ ತುರ್ತು ಸೇವೆಗೆ 108 ಅಂಬುಲೆನ್ಸ್ ನ್ನು ತಂದಿರುವುದರಿಂದ ಸಾವಿರಾರು ಪ್ರಾಣಗಳು ಉಳಿದಿವೆ. ಹಾಗೂ 108 ಸಂಸ್ಥೆ ಹಾಗೂ ಸಿಬ್ಬಂದಿಗಳ ಸೇವೆ ತುಂಬಾ ಅಮೂಲ್ಯವಾದದ್ದು 108 ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೆ ತಮ್ಮ ಕುಟುಂಬಗಳನ್ನು ತೊರೆದು ಯಾವುದೇ ಬೇಧ ಭಾವ ಇಲ್ಲದೇ ಸೇವೆ ಮಾಡುತ್ತಾರೆ ಎಂದು  ಸಾರ್ವಜನಿಕರು 108 ಸಿಬ್ಬಂದಿಯನ್ನು ಪ್ರಶಂಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top