ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ ಸೆಂಡಾಫ್ ಗೆ ನಾವು ಸಿದ್ಧ ಎಂದ ಕ್ರಿಕೆಟ್ ಆಸ್ಟ್ರೇಲಿಯಾ!
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಿವೃತ್ತಿ ವಿಚಾರವಾಗಿ ಬಿಸಿಸಿಐ ಮತ್ತು ಈ ಬಗ್ಗೆ ಮಧ್ಯೆ ಏನು ಮಾತುಕತೆ ನಡೆದಿದೆಯೋ ತಿಳಿದಿಲ್ಲ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಮಾತ್ರ ಭಾರತ ತಂಡದ ಇಬ್ಬರು ಸ್ಟಾರ್ ಆಟಗಾರರಾಗೆ ಬೀಳ್ಕೊಡುಗೆ ನೀಡಲು ಸಿದ್ಧವಾಗಿದೆ. ಭಾರತ ತಂಡದ ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ತೆರಳಲಿದ್ದು ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ಇದು ಕೊಹ್ಲಿ ಮತ್ತು ರೋಹಿತ್ಗೆ ಕೊನೆಯ ಅಂತಾರಾಷ್ಟ್ರೀಯ ಸರಣಿಯಾಗಬಹುದು ಎಂಬ ಅನುಮಾನ ಇದೆ.
ಹೈಲೈಟ್ಸ್:
ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾ ಪ್ರವಾಸ ತೆರಳಲಿರುವ ಟೀಂ ಇಂಡಿಯಾ
ಮೂರು ಏಕದಿನ ಮತ್ತು ಐದು ಅಂತಾರಾಷ್ಟ್ರೀಯ ಟಿ20 ಪಂದ್ಯಗಳ ಸರಣಿ ಆಯೋಜನೆ
ಇದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಕೊನೆಯ ಏಕದಿನ ಸರಣಿ ಎಂಬ ಅನುಮಾನ
ಅದು ನಿಜವಾಗಿದ್ದರೆ ಶ್ರೇಷ್ಠ ಕ್ರಿಕೆಟಿಗರಿಗೆ ನಾವು ಬೀಳ್ಕೊಡುಗೆ ನೀಡಲು ಸಿದ್ಧ ಎಂದ ಕ್ರಿಕೆಟ್ ಆಸ್ಟ್ರೇಲಿಯಾ
ಭಾರತ ಕ್ರಿಕೆಟ್ ತಂಡವು ಇದೇ ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲಿದ್ದು ಮೂರು ಏಕದಿನ ಮತ್ತು ಐದು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಲಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಈ ಸರಣಿಯಲ್ಲಿ ಆಡಲಿದ್ದು ಇದು ಬಹುಶಃ ಅವರ ಕೊನೆಯ ಏಕದಿನ ಸರಣಿಯಾಗಿರಬಹುದು ಎಂದೇ ಹೇಳಲಾಗುತ್ತಿದೆಆಸ್ಟ್ರೇಲಿಯಾ ಕ್ರಿಕೆಟ್ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಟಾಡ್ ಗ್ರೀನ್ಬರ್ಗ್ ಅವರು ಮಾತನಾಡಿ, ಇದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಕೊನೆಯ ಸರಣಿಯಾಗಿರಬಹುದು. ಆದರೆ ಈ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಇದು ಕೊನೆಯ ಬಾರಿಗೆ ಆಗಿದ್ದರೆ, ಅವರಿಗೆ ಉತ್ತಮವಾದ ಬೀಳ್ಕೊಡುಗೆ ನೀಡಲು ನಾವು ಬಯಸುತ್ತೇವೆ. ಅಂತರರಾಷ್ಟ್ರೀಯ ಕ್ರಿಕೆಟ್ಗೆ ಅವರು ನೀಡಿದ ಕೊಡುಗೆಯನ್ನು ನಾವು ಗೌರವಿಸುತ್ತೇವೆ” ಎಂದು ಹೇಳಿದರು.
ವರ್ಣಭೇದ ನೀತಿ ಸಹಿಸೊಲ್ಲ
ಇದೇವೇಳೆ ಭಾರತೀಯ ಆಟಗಾರರ ವಿರುದ್ಧದ ವರ್ಣಭೇದ ನೀತಿಯ ಬಗ್ಗೆಯೂ ಅವರು ಮಾತನಾಡಿದರು. ಯಾವುದೇ ರೀತಿಯ ವರ್ಣಭೇದ ನೀತಿಯನ್ನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು. “ನನ್ನ ಸಂದೇಶ ಸರಳವಾಗಿದೆ. ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಸುರಕ್ಷಿತವಾಗಿರಬೇಕು. ಯಾವುದೇ ರೀತಿಯ ವರ್ತನೆ ಕಂಡುಬಂದರೆ, ನಾವು ಅದನ್ನು ಸಹಿಸುವುದಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
“ನಮ್ಮ ಭಾರತೀಯ ಅಭಿಮಾನಿಗಳು, ಇಂಗ್ಲಿಷ್ ಅಭಿಮಾನಿಗಳು ಅಥವಾ ಬೇರೆ ಯಾವುದೇ ದೇಶದ ಅಭಿಮಾನಿಗಳು ಇರಲಿ, ಎಲ್ಲರೂ ಸುರಕ್ಷಿತವಾಗಿರಬೇಕು. ತಮ್ಮ ತಂಡವನ್ನು ಬೆಂಬಲಿಸಲು ಅವರಿಗೆ ಅವಕಾಶ ಸಿಗಬೇಕು. ಯಾರೂ ನಿಂದನೆಗೆ ಒಳಗಾಗಬಾರದು. ಯಾರಾದರೂ ಕೆಟ್ಟದಾಗಿ ವರ್ತಿಸಿದರೆ, ಅವರನ್ನು ಕ್ರೀಡಾಂಗಣದಿಂದ ಹೊರಗೆ ಹಾಕಲಾಗುವುದು. ಅಭಿಮಾನಿಗಳಿಗೆ ಶಿಕ್ಷಣ ನೀಡಲು ಮತ್ತು ಗೌರವಯುತ ವಾತಾವರಣವನ್ನು ಸೃಷ್ಟಿಸಲು ನಾವು ಪ್ರಯತ್ನಿಸುತ್ತೇವೆ” ಎಂದು ಭರವಸೆ ನೀಡಿದರು.”ಕೆಲವೊಮ್ಮೆ ಜನರು ತಪ್ಪು ಮಾಡಬಹುದು. ಆದರೆ, ನಾವು ಅದನ್ನು ಕ್ಷಮಿಸುವುದಿಲ್ಲ. ಅಂತಹ ವ್ಯಕ್ತಿಗಳನ್ನು ಕ್ರೀಡಾಂಗಣದಿಂದ ಹೊರಗೆ ಹಾಕಲಾಗುವುದು. ಏಕೆಂದರೆ, ಪಂದ್ಯವನ್ನು ವೀಕ್ಷಿಸುವುದು ಒಂದು ಹಕ್ಕು ಅಲ್ಲ, ಅದು ಒಂದು ಸವಲತ್ತು. ನೀವು ಸರಿಯಾಗಿ ವರ್ತಿಸದಿದ್ದರೆ, ನಿಮ್ಮನ್ನು ಸ್ವಾಗತಿಸುವುದಿಲ್ಲ. ಭಾರತೀಯ ಆಟಗಾರರು ಮತ್ತು ಅಭಿಮಾನಿಗಳು, ಮತ್ತು ಎಲ್ಲಾ ದೇಶಗಳ ಅಭಿಮಾನಿಗಳು ನಮ್ಮ ಕ್ರೀಡಾಂಗಣಗಳಲ್ಲಿ ಸುರಕ್ಷಿತವಾಗಿರಬೇಕು ಎಂದು ನಾವು ಬಯಸುತ್ತೇವೆ” ಎಂದು ಗ್ರೀನ್ಬರ್ಗ್ ಹೇಳಿದ್ದಾರೆ.ನಿಂದನೆಗೊಳಗಾಗಿದ್ದ ಸಿರಾಜ್
ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದಲ್ಲಿ ವರ್ಣಭೇದ ನೀತಿಯ ಘಟನೆಗಳು ನಡೆದಿದ್ದವು. 2021ರಲ್ಲಿ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರು ವರ್ಣಭೇದ ನಿಂದನೆಗೆ ಒಳಗಾಗಿದ್ದರು. ಜಸ್ಪ್ರೀತ್ ಬುಮ್ರಾ ಕೂಡ ನಿಂದನೆಗೆ ಒಳಗಾಗಿದ್ದರು. ಈ ಬಗ್ಗೆ ಭಾರತ ತಂಡದ ಆಡಳಿತ ಮಂಡಳಿ ದೂರು ದಾಖಲಿಸಿತ್ತುಕಳೆದ ವರ್ಷ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದಾಖಲೆಯ ಪ್ರಮಾಣದಲ್ಲಿ ಟಿಕೆಟ್ಗಳು ಮಾರಾಟವಾಗಿದ್ದವು. ಈ ವರ್ಷವೂ ಅದೇ ರೀತಿ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಆಗಸ್ಟ್ನಿಂದ ಮಾರ್ಚ್ವರೆಗೆ ನಡೆಯುವ ಎಲ್ಲಾ ಪಂದ್ಯಗಳು ಬಹುತೇಕ ಮಾರಾಟವಾಗಬಹುದು. ಈ ಬೇಸಿಗೆಯಲ್ಲಿ ಹಿಂದೆಂದೂ ಕಂಡರಿಯದಂತಹ ಕ್ರಿಕೆಟ್ ನಡೆಯಲಿದೆ. ಭಾರತದಿಂದ ಉತ್ತಮ ಆಟಗಾರರು ಬರಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಕೊನೆಯ ಬಾರಿಗೆ ಆಸ್ಟ್ರೇಲಿಯಾದಲ್ಲಿ ಆಡುತ್ತಿರಬಹುದು.