ಹಿರಿಯ ಬಂಡಾಯ ಸಾಹಿತಿ (ಚಂಪಾ) ಚಂದ್ರಶೇಖರ್ ಪಾಟೀಲ್ ನಿಧನಕ್ಕೆ ಸಂತಾಪ

ಕುಷ್ಟಗಿ,ಜ,10 : ಹಳೇ ಪ್ರವಾಸಿ ಮಂದಿರದಲ್ಲಿ ಸಮುದಾಯ ಸಂಘಟನೆಯಿಂದ ಆಯೋಜಿಸಿದ್ದ,ನಿಧನರಾದ ಚಂಪಾ ರವರ ಶ್ರjournalistದ್ಧಾಂಜಲಿ ಸಭೆಯಲ್ಲಿ ಹೋರಾಟಗಾರರು ಹಾಗೂ ಖ್ಯಾತ ಪತ್ರಕರ್ತರಾದ ಗಂಗಾಧರ ಕುಷ್ಟಗಿಯವರು ಮಾತನಾಡಿ, ಕನ್ನಡ ನಾಡಿನ ಕವಿ,ನಾಟಕಕಾರ, ಪತ್ರಿಕಾ ಸಂಪಾದಕ,ಆಡಳಿತಗಾರ,ಬಂಡಾಯ ಮತ್ತು ನವೋದಯ ಕವಿ, ಕನ್ನಡ ಹೋರಾಟಗಾರ ಹೀಗೆ ಬಹುಮುಖ ವ್ಯಕ್ತಿತ್ವದಿಂದ ಪ್ರಸಿದ್ಧರಾಗಿದ್ದ ಚಂಪಾ ಎಂದೇ ಖ್ಯಾತರಾಗಿದ್ದ ಪ್ರೊ.ಚಂದ್ರಶೇಖರ್ ಪಾಟೀಲ್ 83 ವರ್ಷ ಬೆಂಗಳೂರಿನ ಕೋಣನಕುಂಟೆಯ ಆಸ್ಟ್ರಾ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ 6:30ಕ್ಕೆ ನಿಧನರಾದರು. ಚಂಪಾರವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ,ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ,ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ,ಸಂಕ್ರಮಣ ಮಾಸಪತ್ರಿಕೆಯ ಸಂಪಾದಕರಾಗಿ,ಗೋಕಾಕ ವರದಿ ಜಾರಿಗಾಗಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ, ರಾಜ್ಯಾದ್ಯಂತ ಡಾ. ರಾಜಕುಮಾರ ರವರ ಜೊತೆ ಕನ್ನಡ ಜಾಗೃತಿ ಸಭೆಗಳಲ್ಲಿ ಭಾಗವಹಿಸಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಹೀಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜೊತೆಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಕನ್ನಡ ಕನ್ನಡ ಬರ್ರೀ ನಮ್ಮ ಸಂಗಡ ಕವಿತೆಯ ಖ್ಯಾತಿ ಹಾಗೂ ಕನ್ನಡ ನಾಡು ನುಡಿ ಸಂಸ್ಕೃತಿಯ ಹೋರಾಟಗಾರರು, ಇವರ ಅಗಲಿಕೆಯಿಂದ ಕನ್ನಡಾಂಬೆಯ ಸುಪುತ್ರನನ್ನು ಕಳೆದುಕೊಂಡಂತ್ತಾಗಿ,ಸಾಹಿತ್ಯ ಸಾರಸತ್ವ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾತನಾಡಿದರು. ಚಂಪಾ ರವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಚಾರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮುದಾಯದ ಆದ್ಯಕ್ಷರಾದ ನಬಿಸಾಬ ಕುಷ್ಟಗಿ, ಮಾಜಿ ಅಧ್ಯಕ್ಷರಾದ ಮೋಹನ್ ಲಾಲ್ ಜೈನ್, ಪುರಸಭೆ ಸದಸ್ಯರಾದ ಜಯತೀರ್ಥ ಆಚಾರ್, ರವೀಂದ್ರ ಬಾಕಳೆ ಮಾತನಾಡಿದರು. ಸಮುದಾಯದ ಉಪಾಧ್ಯಕ್ಷರಾದ ಅಡಿವೆಪ್ಪ ಕುಷ್ಟಗಿ, ಸಂಘಟನಾ ಕಾರ್ಯದರ್ಶಿ ಯಾದ ಶಿಕ್ಷಕ ನಾಗರಾಜ ಪಟ್ಟಣಶೆಟ್ಟರ,ಮಾಜಿ ಪುರಸಭೆ ಸದಸ್ಯರಾದ ಚಂದ್ರಶೇಖರ ಹಿರೇಮನಿ, ಸಮುದಾಯದ ಸದಸ್ಯರಾದ ಶಾಂತಪ್ಪ ಹಡಪದ, ಮುರ್ತುಜಾಸಾಬ,ಕಿರಣ್ ಕುಮಾರ್ ,ಶರಣಪ್ಪ ಲೈನದ್, ಅಬ್ದುಲ್ ಕಲಾಂ ಇನ್ನಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top