ಬೂದಗುಂಪಾ ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಜಯಂತೋತ್ಸವ

ಕಾರಟಗಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ವಾಲ್ಮೀಕಿ ಜಯಂತೋತ್ಸವ ವನ್ನು ಬೂದಗುಂಪಾ ಗ್ರಾಮದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು ಮೊದಲಿಗೆ ಗ್ರಾಮದಲ್ಲಿ ಕುಂಭ ಕಳಸ ಬಾಜಾ ಬಜಂತ್ರಿ ಗಳೊಂದಿಗೆ ಮುಖ್ಯ ರಸ್ತೆ ಮೂಲಕ ದೇವಸ್ಥಾನದಿಂದ ವಾಲ್ಮೀಕಿ ದೇವಸ್ಥಾನದವರೆಗೆ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಯಿತು ನಂತರ ಮಾತನಾಡಿದ ಶಾಸಕ ಬಸವರಾಜ ದಢೇಸೊಗೂರ್ ವಾಲ್ಮೀಕಿಯು ಒಂದೇ ಸಮಾಜಕ್ಕೆ ಸೀಮಿತವಾಗಬಾರದು ವಾಲ್ಮೀಕಿಯು ಎಲ್ಲಾ ಸಮಾಜಕ್ಕೆ ಸೇರಿದವರು ಜಗತ್ತಿಗೆ ರಾಮನನ್ನ ಪರಿಚಯಿಸಿದ್ದು ವಾಲ್ಮೀಕಿಯು ಆದ್ದರಿಂದ ಎಲ್ಲಾ ಸಮಾಜದ ಬಾಂಧವರು ಭಾಗವಹಿಸಿದ್ದು ಖುಷಿ ತಂದಿದೆ ಎಂದರು.


ಕನಕಗಿರಿ ಶಾಸಕರಾದ ಸನ್ಮಾನ್ಯ ಶ್ರೀ ಬಸವರಾಜ ಧಡೇಸುಗೂರು ರವರು ಭಾಗವಹಿಸಿದರು ಮತ್ತು ನಾಗರಾಜ ಬಿಲ್ಗಾರ, ವೀರೇಶ್ವರ ಸಾಲೋಣಿ, ಮೋಹನರಾವ್, ತಿಮ್ಮನಗೌಡ, ರುದ್ರಗೌಡ ನಂದಿಹಳ್ಳಿ, ಗುರುಸಿದ್ದಪ್ಪ ಯರಕಲ್, ಕಾಶಿ ವಿಶ್ವನಾಥ, ಹಾಗೂ ಊರಿನ ಮುಖಂಡರು ಪಕ್ಷದ ಪಧಾದಿಕಾರಿಗಳು, ಪ್ರಮುಖರು, ಹಿರಿಯರು, ಯುವಕರು, ಭಾಗವಹಿಸಿದರು.

Leave a Comment

Your email address will not be published. Required fields are marked *

Translate »
Scroll to Top