ಕುಷ್ಟಗಿ,ಜ,9 :- ಶಾಲೆ ಶಾಲೆಗಳಿಗೆ ತಿರುಗಿ ನೀವು ಕೆಲಸ ಮಾಡಿ ನೀನು ಕೆಲಸ ಮಾಡು ಎಂದರೆ ಶಾಸಕ ಎನಿಸಿಕೊಳ್ಳುವದಿಲ್ಲ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕುಷ್ಟಗಿ ಕ್ಷೇತ್ರದ ಪ್ರತಿ ಸಮಸ್ಯೆಗಳನ್ನು ಹಾಲಿಸಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಟ್ಟಾಗ ಮಾತ್ರ ಒಬ್ಬ ಶಾಸಕನಾಗುತ್ತಾನೆ ಅಂತಹ ಕೆಲಸವನ್ನು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮಾಡಬೇಕಾಗಿದೆ ಎಂದು ಗಂಗಾಧರ ಕುಷ್ಟಗಿ ಹೇಳಿದರು. ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯನ್ನು ನೆಡೆಸಿ ಮಾತನಾಡಿದ ಅವರು ಅಧಿಕಾರಿಗಳು ಮಾಡುವಂತ ಕೆಲಸವನ್ನು ಒಬ್ಬ ಶಾಸಕ ಮಾಡಬಹುದೆ ಎಂದು ಪ್ರಶ್ನಿಸಿದ ಅವರು ಶಾಸನಗಳಿಗೆ ಬೇಟಿ ನೀಡಿ ಕೆಲಸ ಮಾಡಿ ಎಂದರೆ ಕುಷ್ಟಗಿ ಕ್ಷೇತ್ರ ಅಭಿವೃದ್ಧಿ ಆಗುತ್ತದೆ ಇದನ್ನು ಶಾಸಕರು ತಿಳಿಸಬೇಕು ಆದರೆ ಕೃಷ್ಣಾ ಬೀ ಸ್ಕೀಂ ನೀರಾವರಿ ಯೋಜನೆ ಸಂಪೂರ್ಣಗೊಳ್ಳುತ್ತಿಲ್ಲ ಹೊಲಗಳಿಗೆ ನೀರು ಬರುತ್ತಿಲ್ಲ ಶಾಸಕರಾದವರು ಸರಕಾರದ ಗಮನಕ್ಕೆ ತಂದು ಮಾಡಬೇಕಾದ ಕೆಲಸಗಳು ಸಾಕಷ್ಟು ಇವೇ ಮತ್ತು ರೈತರಿಗೆ ಬೇಕಾದ ಅವಶ್ಯಕತೆ ಕೆಲಸವನ್ನು ಶಾಸಕರು ಮಾಡಬೇಕು ಎಂದರು.
ಆದರೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರಿಂದ ಕೃಷ್ಣಾ ಬೀ ಸ್ಕೀಂ ಯೋಜನೆ ಬಗ್ಗೆ ಸ್ವಲ್ಪವು ಕೂಡ ಎಳ್ಳಷ್ಟು ಕಾಳಜಿ ತೋರುಸುತ್ತಿಲ್ಲ ಶಾಸಕರು ಮಾಡುವಂತ ಕೆಲಸ ಇದೇನಾ ಎಂದು ಟೀಕಿಸಿದರು. ನೆನೆಗುದಿಗೆ ಬಿದ್ದಿರುವ ಕೃಷ್ಣಾ ಬೀ ಸ್ಕೀಂ ಯೋಜನೆ ಸಂಪೂರ್ಣಗೊಳ್ಳಬೇಕು ಕನ್ನಡ ಪರ ಸಂಘನೆಗಳು ಹಾಗೂ ಹೋರಾಟಪರ ಚಿಂತಕರು ನೀರಾವರಿ ಯೋಜನೆಗಾಗಿ ಹೋರಾಟ ನೆಡೆಸಿ ಪ್ರತಿಯೊಬ್ನ ರಾಜಕಾರಣಿಗು ಹೆಚ್ಚರಿಸಬೇಕು ಸರಕಾರದ ನಿರ್ಲಕ್ಷ ಧೋರಣೆಗೆ ನಾಂದಿ ಹಾಡಬೇಕು ಎಂದು ಹೇಳಿದರು.