ಪ್ರಖ್ಯಾತಿ ರಂಗಭೂಮಿ ಕಲಾವಿದ ಇನ್ನಿಲ್ಲ

ಕುಷ್ಟಗಿ:- ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ಪ್ರಖ್ಯಾತಿ ಪಡೆದ ರಂಗಭೂಮಿ ಕಲಾವಿದ ಐ.ಡಿ.ಬಾಬು ಎಸ್.ಟಿ.ಗೋನಾಳ ನಿನ್ನೆ ಸಂಜೆ ೫.೩೦ ಕ್ಕೆ ತಮ್ಮ ಸ್ವ-ಗ್ರಾಮದಲ್ಲಿ ನಿಧನ ಹೊಂದಿದ್ದಾರೆ. ಆದರೆ ಮೂಲತ ಬಾಗಲಕೋಟ ಜಿಲ್ಲೆ ಇಲಕಲ್ಲ ತಾಲೂಕಿನ ಎಸ್.ಟಿ.ಗೋನಾಳ ಗ್ರಾಮದವರು ಇವರು ರಂಗಭೂಮಿ ಕಲಾವಿದರಾಗಿ ಕುಷ್ಟಗಿ ಪಟ್ಟಣಕ್ಕೆ ಬಂದು ಸುಮಾರು ೪೦ ವರ್ಷಗಳು‌ ಕಳೆದಿದೆ ಇವರು ಸ್ಥಳೀಯ ವಿಷ್ಣುತೀರ್ಥ ನಗರದ ನಿವಾಸಿಯಾಗಿದ್ದಾರೆ. ರಂಗಭೂಮಿ ಕಲಾವಿದರಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿ ಹಾರ್ಮೋನಿಯಂ ಶಿಕ್ಷಕರಾಗಿ ಅನೇಕ ನಾಟಕಗಳಲ್ಲಿ ನಿರ್ದೆಶನ ಮಾಡಿ ಪಾತ್ರದಾರಿಗಳಿಗೆ ಸಲಹೆ ಸೂಚನೆಗಳನ್ನು ಮಾಡುತ್ತಿದ್ದರು ಹಾಗೂ ಕಲೆ ಮತ್ತು ಸಂಸ್ಕೃತಿಗೆ ಒತ್ತು ಕೊಟ್ಟು ರಂಗಭೂಮಿ ಕಲಾವಿದನೆಂದು ಪ್ರಖ್ಯಾತಿ ಪಡೆದ ಕೀರ್ತಿ ಇವರದಾಗಿತ್ತು. ಇವರು ವಜೀರ್ ಅಲಿ ಗೋನಾಳರವರ ತಂದೆಯವರಾಗಿದ್ದು ಇವರಿಗೆ ಒಬ್ಬ ಪುತ್ರ, ಮೂವರು ಪುತ್ರಿಯರು ಸೊಸೆ ಹೆಂಡತಿ ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.


ಇವರಿಗೆ ಕುಷ್ಟಗಿ ಕಲಾ ಬಳಗದವರು ಅಗಲಿದ ಜೀವದ ಆತ್ಮಕ್ಕೆ ಶಾಂತಿ ಕೊರಿದ್ದಾರೆ. ಇವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 2ಗಂಟೆಗೆ ಹನಮಸಾಗರ ರಸ್ತೆಯ ಹಳೇ ವಣಗೇರಿ ರಸ್ತೆಯ ಕಬರಸ್ತಾನ ಕುಷ್ಟಗಿಯಲ್ಲಿ ನಡೆಯಲಿದೆ.

Leave a Comment

Your email address will not be published. Required fields are marked *

Translate »
Scroll to Top