ಕನ್ನಡ ಚಿತ್ರ ರಂಗದ ಹೆಸರಾಂತ ನಿರ್ದೇಶಕ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರ ರಂಗದ ಹೆಸರಾಂತ ನಿರ್ದೇಶಕ ಇಂದು ನಮ್ಮನ್ನೆಲ್ಲ ಆಗಲಿದ್ದಾರೆ. ಕನ್ನಡದಲ್ಲ ಉನ್ನತ ಸಿನಿಮಾಗಳನ್ನ ನೀಡಿರುವ ಇವರು ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ ಅವುಗಳಲ್ಲಿ ಪ್ರಮುಖ ಸಿನಿಮಾಗಳಾದ ‘ಬೆಳ್ಳಿ ಕಾಲುಂಗುರ’, ‘ಯುದ್ಧಕಾಂಡ’ ಮುಂತಾದ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಚಂದನವನದ ಖ್ಯಾತ ನಿರ್ದೇಶಕ ಕೆ.ವಿ. ರಾಜು(೬೭) ಶುಕ್ರವಾರ ನಿಧನರಾಗಿದ್ದಾರೆ.

ಬೆಂಗಳೂರು ನಗರದ ರಾಜಾಜಿನಗರದಲ್ಲಿರುವ ಅವರ ನಿವಾಸದಲ್ಲಿ ರಾಜು ಅವರು ಬೆಳಗ್ಗೆ ಕೊನೆಯುಸಿರೆಳೆದಿದ್ದು, ನಿವಾಸದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಇವರು ಕನ್ನಡ ಅಲ್ಲದೆ ಇನ್ನು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಟನೆಯ ‘ಇಂದ್ರಜಿತ್’, ಚಂದನವನದಲ್ಲಿ ‘ಸುಂದರಕಾಂಡ’, ‘ಕದನ’. ‘ಪೊಲೀಸ್ ಲಾಕಪ್’, ‘ಬೆಳ್ಳಿ ಮೋಡಗಳು’,‘ಬೊಂಬಾಟ್ ಹುಡುಗ’, ‘ಅಭಿಜಿತ್’, ‘ಹುಲಿಯಾ’, ‘ಸಂಗ್ರಾಮ’, ‘ಯುದ್ಧ’ ಮುಂತಾದ ಹಿಟ್ ಚಿತ್ರಗಳನ್ನು ರಾಜು ಅವರು ನಿರ್ದೇಶಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top