ಬಳ್ಳಾರಿಯಲ್ಲಿ ಮೊಹರಂ ಹಬ್ಬಕ್ಕೆ ತಡೆ : ಜಿಲ್ಲಾಧಿಕಾರಿಯ ಆದೇಶ

ಬಳ್ಳಾರಿಯಲ್ಲಿ ಮೊಹರಂ ಹಬ್ಬಕ್ಕೆ ತಡೆ : ಜಿಲ್ಲಾಧಿಕಾರಿಯ ಆದೇಶ

Kannada Nadu
ಬಳ್ಳಾರಿಯಲ್ಲಿ ಮೊಹರಂ ಹಬ್ಬಕ್ಕೆ ತಡೆ : ಜಿಲ್ಲಾಧಿಕಾರಿಯ ಆದೇಶ

ಬಳ್ಳಾರಿಯಲ್ಲಿ ಮೊಹರಂ ಹಬ್ಬಕ್ಕೆ ತಡೆ : ಜಿಲ್ಲಾಧಿಕಾರಿಯ ಆದೇಶ

ಬಳ್ಳಾರಿ ಜಿಲ್ಲೆಯಾದ್ಯಂತ ಜೂನ್ 27 ರಿಂದ ಜುಲೈ 7 ರವರೆಗೆ ನಡೆಯುವ ಮೊಹರಂ ಹಬ್ಬದ ಆಚರಣೆಯನ್ನು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕೆಲವು ಗ್ರಾಮಗಳಲ್ಲಿ ನಿಷೇಧಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಗಾಂಧಿನಗರ, ಸಿರುಗುಪ್ಪ, ತೆಕ್ಕಲಕೋಟೆ, ಸಿರಿಗೇರಿ, ಪಿಡಿ ಹಳ್ಳಿ ಮತ್ತು ಕಂಪ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ಈ ನಿಷೇಧ ಹೇರಲಾಗಿದೆ. ಮೆರವಣಿಗೆ, ಬಹಿರಂಗ ಘೋಷಣೆ ಮತ್ತು ಆಯುಧಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ .

ಜಿಲ್ಲಾದ್ಯಂತ ಜೂ.27ರಿಂದ ಜುಲೈ 07ರವರೆಗೆ ಜರುಗುವ ಮೊಹರಂ ಹಬ್ಬದ ಆಚರಣೆಯನ್ನು ಜಿಲ್ಲೆಯ ನಾನಾ ತಾಲೂಕಿನ ಕೆಲ ಗ್ರಾಮಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಆದೇಶ ಹೊರಡಿಸಿದ್ದಾರೆ.

ಬಳ್ಳಾರಿಯ ಗಾಂಧಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ತಾಳೂರು ರಸ್ತೆಯ ಕನ್ನಡ ನಗರ ಮುಖ್ಯ ರಸ್ತೆಯ (ನ್ಯಾಯಾಧೀಶರ ವಸತಿಗೃಹ ಕಾಂಪೌಂಡ್‌ ಪಕ್ಕದಲ್ಲಿ) ಮಹಾನಂದಿ ಕೊಟ್ಟಂ ಒಳಗಡೆ, ಸಿರುಗುಪ್ಪ ಠಾಣೆ ವ್ಯಾಪ್ತಿಯ ಕೆ.ಸೂಗೂರು, ಮುದೇನೂರು, ಹೀರೆಹಾಳ್‌, ನಾಡಂಗ, ಬಂಡ್ರಾಳ್‌, ದೇಶನೂರು, ಕೆ.ಬೆಳಗಲ…, ಅಲಬನೂರು, ತೆಕ್ಕಲ ಕೋಟೆ ಠಾಣೆ ವ್ಯಾಪ್ತಿಯ ತೆಕ್ಕಲಕೋಟೆ, ಹಳೇಕೋಟೆ, ಉಪ್ಪಾರ ಹೊಸಳ್ಳಿ, ಉಡೇಗೋಳ, ಅರಳಿಗನೂರು, ಸಿರಿಗೇರಿ ಠಾಣೆ ವ್ಯಾಪ್ತಿಯ ಸಿರಿಗೇರಿ, ಕೂರಿಗನೂರು, ತಾಳೂರು, ಕರೂರು, ಪಿಡಿ ಹಳ್ಳಿ ಠಾಣೆ ವ್ಯಾಪ್ತಿಯ ಅಸುಂಡಿ ಗ್ರಾಮ.

ಕಂಪ್ಲಿ ಪೊಲೀಸ್‌ ಠಾಣೆ ವ್ಯಾಪ್ತಿಯ ನಂ.15-ಗೋನಾಳು ಗ್ರಾಮದಲ್ಲಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";