ಜನಾರ್ದನರೆಡ್ಡಿಯವರು ತಂಗುತ್ತಿದ್ದ ಕುಟಿರಕ್ಕೆ ಬೆಂಕಿ

ಗಂಗಾವತಿ : ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜಿ.ಜನಾರ್ಧನ ರೆಡ್ಡಿಯವರು ಗಂಗಾವತಿ ಕ್ಷೇತ್ರದ ಐತಿಹಾಸಿಕ ಪಂಪಾಸರೋವರದಲ್ಲಿ ಆ ಭಾಗದ ಕ್ಷೇತ್ರದ ಜನತೆಯ ಆಗು ಹೋಗುಗಳ ವಿಚಾರಣೆಗೆ ಮತ್ತು ವಿಶ್ರಾಂತಿಗೆಂದು ನಿರ್ಮಿಸಲಾಗಿದ್ದ ಕುಟಿರಕ್ಕೆ ಬೆಂಕಿ ತಗುಲಿದ ಘಟನೆ ವರದಿಯಾಗಿದೆ.

 

ಇತ್ತೀಚಿಗೆ ಕ್ಷೇತ್ರದ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಜನತೆ ಅಲ್ಲಿಗೆ ಆಗಮಿಸಿ ಅನೇಕ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದರು, ಇದನ್ನೆಲ್ಲ ಗಮನಿಸುತ್ತಿದ್ದ ವಿರೋಧಿಗಳು ಜನಾರ್ಧನ ರೆಡ್ಡಿಯವರ ಜನಪ್ರಿಯತೆಯನ್ನು ಸಹಿಸಲಾಗದೆ ಐತಿಹಾಸಿಕ ಸ್ಥಳದ ಮಹಿಮೆಯನ್ನು ಅರಿಯದೆ ಆ ಕುಟೀರಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಕೆಆರ್ ಪಿಪಿ ಮುಖಂಡರು ಆರೋಪಿಸಿದ್ದಾರೆ.

ಈ ಘಟನೆಯಲ್ಲಿ ಕುಟಿರದೊಳಗಿದ್ದ ಪೀಠೋಪರಣಗಳು ಮತ್ತು ಕೆಲವು ಅಗತ್ಯ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೆಆರ್ಪಿಪಿ ಮುಖಂಡರು ಒತ್ತಾಯಿಸಿದ್ದಾರೆ

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top