ಪ್ರಶಂಸೆ ಗಿಟ್ಟಿಸಿಕೊಂಡ ಸುದೀಪ್ ರಿಲೀಸ್ ಮಾಡಿದ ’ಡೈಮಂಡ್ ಕ್ರಾಸ್’ ಟ್ರೇಲರ್

ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾದಲ್ಲಿ ಪಳಗಿದ ಒಂದಿಷ್ಟು ಪ್ರತಿಭೆಗಳು ಸೇರಿ ತಯಾರಿಸಿರುವ ಸಿನಿಮಾ ’ಡೈಮಂಡ್ ಕ್ರಾಸ್’. ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಟ್ರೇಲರ್ ನೋಡಿ ಮಾತನಾಡಿದ ಅವರು ಟ್ರೇಲರ್ ನೋಡಿದಾಗ ಇದೊಂದು ಚಿಕ್ಕ ಬಜೆಟ್ ಸಿನಿಮಾ ಎನಿಸಲಿಲ್ಲ. ಮೇಕಿಂಗ್ ನೋಡಿದಾಗ ಹೈ ಬಜೆಟ್ ಸಿನಿಮಾ ತರಾ ಕಾಣತಾ ಇದೆ. ಐಡಿಯಾ ಇಟ್ಟುಕೊಂಡು ಸಿನಿಮಾ ಮಾಡಿದ್ದು ತಾಂತ್ರಿಕವಾಗಿ ಟ್ರೇಲರ್ ಚನ್ನಾಗಿ ಬಂದಿದೆ.

ಈ ಹೊಸ ತಂಡವನ್ನು ನಾಣು ಚಿತ್ರರಂಗಕ್ಕೆ ಸ್ವಾಗತ ಮಾಡುತ್ತೇನೆ. ಸಿನಿಮಾ ಇಂಡಸ್ಟ್ರಿ ಇಂದು ಕ?ದಿಂದ ಕೂಡಿದ್ದು, ನಾವು ಹೊಟ್ಟೆ ತುಂಬಿದವಕ್ಕಿಂತ ಹೊಟ್ಟೆ ಹಸಿದಿರುವ ತಂಡಕ್ಕೆ ಸಹಾಯ ಮಾಡೋಣ’ ಎಂದು ಹೇಳಿದರು. ಇದಕ್ಕೂ ಮೋದಲು ಚಿತ್ರದ ಟೈಟಲ್ ಗೀತೆಯೊಂದನ್ನು ಬಿಡುಗಡೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್ ’ನಂಗೆ ಈ ಟ್ರೇಲರ್‌ನ್ನು ಸುದೀಪ್ ಅವರ ಕೈಲಿಂದಲೇ ಬಿಡುಗಡೆ ಮಾಡಿಸಬೇಕೆಂದು ಕಾಲ್ ಮಾಡಿದೆ. ಅವರು ಇಂದಿನ ಕಾರ್ಯಕ್ರಮಕ್ಕೆ ಬಂದಿರುವುದು ಖುಷಿ ತಂದಿದೆ. ೫-೬ ವ?ದ ಹಿಂದೆ ರಾಮಚಂದ್ರ ಬಾಬು ನನಗೆ ಈ ಕಥೆ ಹೇಳಿದ್ರು. ಅದಾದಮೇಲೆ ಟೆಂಟ್ ಶಾಲೆಯಲ್ಲಿ ಚರ್ಚೆ, ಮಾತುಕತೆ ನಡೆದು ಕಥೆ ಬೆಳಿತಾ ಸಾಗಿ ಇಂದು ಸಿನಿಮಾ ಆಗಿದೆ. ಈ ಎಲ್ಲಾ ಪ್ರತಿಭೆಗಳು ನಮ್ಮ ಟೆಂಟ್ ಸಿನಿಮಾ ಶಾಲೆಯಿಂದ ಬಂದವರು. ಜೊತೆಗೆ ಸಂಬಂದಿ ಮಕ್ಕಳು ಇದರಲ್ಲಿ ಕೆಲಸ ಮಾಡಿದ್ದು, ಇದು ನಮ್ಮದೆ ಸಿನಿಮಾ ಆಗಿದ್ದು, ನಿಮ್ಮಗಳ ಸಹಕಾರ ಬೇಕು ಎಂದುರು.


ಸೈಬರ್ ಕ್ರೈಮ್ ಕಥೆ ಒಳಗೊಂಡ ಈ ಸಿನಿಮಾ ಆಕ್ಷನ್, ಥ್ರಿಲ್ಲರ್ ಕಥಾ ಸಂದರ ಒಳಗೊಂಡಿದೆ. ಚಿತ್ರದಲ್ಲಿ ಒಂದೇ ಗೀತೆ ಇರುವುದು ವಿಶೇಷ. ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ರಾಮ್ ದೀಪ್ ’ಇದು ನನ್ನ ನಿರ್ದೇಶನದ ೨ನೇ ಸಿನಿಮಾ. ಸೈಬರ್ ಕ್ರೈಮ್‌ನ್ನು ಕೆಟ್ಟದಕ್ಕೆ ಹಾಗೂ ಒಳ್ಳೆಯದಕ್ಕೆ ಹೇಗೆ ಬಳಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಿನಿಮಾ ಮಾಡಲಾಗಿದೆ. ಈಗಾಗಲೇ ರಿಲೀಸ್‌ಗೆ ಸಿದ್ಧವಿರುವ ನಮ್ಮ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಈ ಚಿತ್ರವಾಗಲು ನಮ್ಮ ದಾವಣಗೆರೆ ಬಳಗ ಕಾರಣ’ ಎಂದು ಹೇಳಿದರು. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ ರಾಮಚಂದ್ರ ಬಾಬು. ನಾಗತಿಹಳ್ಳಿ ಸಿನಿ ಕ್ರಿಯೆ?ನ್ಸ್ ಅರ್ಪಿಸುವ ಈ ಚಿತ್ರಕ್ಕೆ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ. ಮಹಲಿಂಗಪ್ಪ ಹೆಚ್, ಬಸವರಾಜ್ ಗೌಡ, ದೀಪು ಎನ್.ಎಸ್, ಪ್ರಸನ್ನಕುಮಾರ್ ಮತ್ತು ರಾಮಚಂದ್ರ ಬಾಬು. ಇವರುಗಳಿಗೆ ಸಹ ನಿರ್ಮಾಪಕರುಗಳಾಗಿ ಸಾಥ್ ನೀಡಿದ್ದಾರೆ. ಶ್ರೀದೇವಿ, ಡಾ. ಶೇಷಾದ್ರಿ, ಶಶಿಕುಮಾರ್ ಜಿವಿ, ಶಿವಪ್ರಸಾದ್ ಎಮ್.ಎನ್ ಹಾಗೂ ಪುಷ್ಪ ನಾಗತಿಹಳ್ಳಿ. ಚಿತ್ರಕ್ಕೆ ಸಂತೋ? ರಾಧಾಕೃ?ನ ಛಾಯಾಗ್ರಹಣ ಮತ್ತು ಸಂಕಲನ, ಅನೀಶ್ ಚೆರಿಯನ್ ಸಂಗೀತ, ಲೇಖನ್ ಶೀರ್ಷಿಕೆ ಹಾಗೂ ಟ್ರೇಲರ್‌ಗೆ ಸಂಗೀತವಿದೆ. ರೋಜರ್ ನಾರಾಯಣ್ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ನಾಯಕಾನಗಿ ರಜತ್ ಅಣ್ಣಪ್ಪ ನಾಯಕ. ನಾಯಕಿಯಾಗಿ ರೂಪಿಕಾ ನಟನೆ ಇದೆ. ತಾರಾಗಣದಲ್ಲಿ ಮನು ಕೆ.ಎಮ್, ರಂಜಿತ್ ಶೆಟ್ಟಿ, ರಾಜು ರಾಯಣ್ಣ, ಶೇಶಾದ್ರಿ ಮುಂತಾದವರು ಇದ್ದಾರೆ.

Leave a Comment

Your email address will not be published. Required fields are marked *

Translate »
Scroll to Top