death news

ಕಲುಷಿತ ನೀರು ಪೂರೈಕೆಯಿಂದ ಓರ್ವ ಬಾಲಕ ಸಾವು

ಹಲವರು ಆಸ್ಪತ್ರೆಗೆ ದಾಖಲು: ಪಿಡಿಒ ರೇಣುಕಾರನ್ನು ತರಾಟಗೆ ತೆಗೆದುಕೊಂಡ ಗ್ರಾಮಸ್ಥರು. ಅರಕೇರಾ : ತಾಲೂಕಿನ ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರು ಅಸ್ವಸ್ಥರಾದ ಘಟನೆ ಜರುಗಿದ್ದು, ಓರ್ವ ಬಾಲಕ ಶುಕ್ರವಾರ ಸಾವಿಗೀಡಾದ ಪ್ರಕರಣ ದಾಖಲಾಗಿದೆ. ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಸುಮಾರು 50 ಕ್ಕೂ ಹೆಚ್ಚು ಜನ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದು, ಕೆಲವರು ಗುಣಮುಖರಾಗಿದ್ದಾರೆ. ಇನ್ನುಳಿದವರಿಗೆ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿರುವ ಕುಡಿಯುವ ನೀರಿನ ಪೈಪ್ ಚರಂಡಿಯಲ್ಲಿ …

ಕಲುಷಿತ ನೀರು ಪೂರೈಕೆಯಿಂದ ಓರ್ವ ಬಾಲಕ ಸಾವು Read More »

ನಿಧನ ವಾರ್ತೆ

ಕವಿತಾಳ ,ಫೆ,20 : ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ದುರುಗಮ್ಮ ಮ್ಯಾಗಳಮನಿ ಕವಿತಾಳ ವಯಸ್ಸು – 94 ಇಂದು ಬೆಳಿಗ್ಗಿನ ಜಾವ ಆರು ಘಂಟೆಯ ಸುಮಾರಿಗೆ ವಯೋ ಸಹಜತೆಯಿಂದ ಮೃತ ಪಟ್ಟಿರುತ್ತಾರೆ. ಇವರಿಗೆ ಒಬ್ಬ ತಂಗಿ, ಒಬ್ಬ ಮಗ, ನಾಲ್ಕು ಜನ ಹೆಣ್ಣು ಮಕ್ಕಳು, 30 ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದರು. ಇವರ ಅಂತ್ಯ ಕ್ರಿಯೆಯೂ ಇಂದು ಸಂಜೆ ಪಟ್ಟಣದ ರುದ್ರ ಭೂಮಿಯಲ್ಲಿ ನಡೆಯಲಿದೆ.

Translate »
Scroll to Top