birthday

ನಟಭಯಂಕರ ಸಿನಿಮಾದ ವಿಶೇಷ ಪೋಸ್ಟರ್ ಬಿಡುಗಡೆ

ಬೆಂಗಳೂರು,ಫೆ,24 : ಬಿಗ್‌ ಬಾಸ್ ಖ್ಯಾತಿಯ ಪ್ರಥಮ್ ನಿರ್ದೇಶನದ ನಟಭಯಂಕರ ಸಿನಿಮಾದ ವಿಶೇಷ ಪೋಸ್ಟರ್ ನ್ನು ಸಿದ್ದರಾಮಯ್ಯ ಅವರು ಇಂದು ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಜೊತೆಗೆ ಪ್ರಥಮ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಚಂದನಾ ರಾಘವೇಂದ್ರ ಹಾಗೂ ನಿಹಾರಿಕ ಶೆಣೈ ಹಾಜರಿದ್ದರು.

ವಿಧಾನಸೌಧದ ಮುಂಭಾಗದಲ್ಲಿ ನೇತಾಜಿ ಅವರ ಪ್ರತಿಮೆ ಸ್ಥಳಾಂತರ

ಬೆಂಗಳೂರು, ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗದಲ್ಲಿ ಸೂಕ್ತ ಜಾಗಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಇಂದು ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನಾಚಾರಣೆಯ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು. ಸೂಕ್ತ ಸ್ಥಳದಲ್ಲಿ ಅವರ ಪ್ರತಿಮೆ ಇರುವುದು ಅವರಿಗೆ ನಾವು ಸಲ್ಲಿಸಬೇಕಾದ ಗೌರವ. ಈ ಬಗ್ಗೆ ಕೂಡಲೇ ತೀರ್ಮಾನವನ್ನು ಕೈಗೊಳ್ಳಲಾಗುವುದು. ನೇತಾಜಿ ಅವರ ಮುಂದಿನ …

ವಿಧಾನಸೌಧದ ಮುಂಭಾಗದಲ್ಲಿ ನೇತಾಜಿ ಅವರ ಪ್ರತಿಮೆ ಸ್ಥಳಾಂತರ Read More »

“ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ”,

ಕಾರಟಗಿ,ಜ,12 : ನಮ್ಮ ದೇಶ ಕಂಡ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು. ಇವರ ಹೆಸರು ಕೇಳಿದ ತಕ್ಷಣ ನಮಗೆ ನೆನಪಿಗೆ ಬರುವುದು ಅವರು ನಮ್ಮ ದೇಶದ ಯುವ ಜನತೆಯ ಕುರಿತು ಹೇಳಿದ ಆ ಒಂದು ಮಾತು, “ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ”, ಈ ಮಾತು ನಮ್ಮ ದೇಶದ ಬಹುತೇಕ ಯುವಕರ ಮೇಲೆ ಪರಿಣಾಮ ಬೀರಿದೆ. ಎಂದು ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷ ವಿರೇಶ ಶೇಟ್ಟರ್ ಸಂಘ ದಿಂದ ಆಯೋಜಿಸಲಾದ ಜಯಂತೋತ್ಸವದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು …

“ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ”, Read More »

ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮದಿನಾಚರಣೆ

ಕೊಪ್ಪಳ,ಡಿ,25 : ಇಂದು ಕನಕಗಿರಿ ಬಿಜೆಪಿ ಕಾರ್ಯಾಲಯದಲ್ಲಿ ಭಾರತ ರತ್ನ, ಅಜಾತಶತ್ರು ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಮಹಾಂತೇಶ್ ಸಜ್ಜನ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರು ಹಾಗೂ ಮಾನ್ಯ ಶಾಸಕರ ಸುಪುತ್ರರಾದ ಶ್ರೀ ಮೌನೇಶ್ ದಡೇಸೂಗೂರು ಮುಖಂಡರಾದ ಶ್ರೀ ವಾಗೀಶ್ ಹಿರೇಮಠ, ಸಣ್ಣ ಕನಕಪ್ಪ, ಪ್ರಕಾಶ್ ಹಾದಿಮನಿ,ಸುರೇಶಪ್ಪ ಗುಗ್ಗಳಶೆಟ್ಟಿ, ರವಿ ಸಜ್ಜನ್, ನಿಂಗಪ್ಪ ಪೂಜಾರ, ಸುಭಾಸ್ ಕಂದಕೂರ, ಪುರುಷೋತ್ತಮರೆಡ್ಡಿ ಮಾದಿನಾಳ, ಶರಣಪ್ಪ …

ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮದಿನಾಚರಣೆ Read More »

ಶಾಸಕರ ಹುಟ್ಟು ಹಬ್ಬದ ಅಂಗವಾಗಿ ಒಳ ರೋಗಿಗಳಿಗೆ ಹಾಲು ಹಣ್ಣು ವಿತರಣೆ

ಕುಷ್ಟಗಿ:- ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಇವರ 68ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಶಾಸಕರ ಆಪ್ತರಿಂದ ಕುಷ್ಟಗಿ ತಾಲೂಕು ಆಸ್ಪತ್ರೆ ಒಳ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸ್ವತ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರವರೇ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಶೇಖರಗೌಡ ಮಾಲಿ ಪಾಟೀಲ, ನಿಜಾಮ್ ಕಪಾಲಿ, ಯಮನೂರ ಸಂಗಂಟಿ, ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.

ರೈತರ ಆಶಾಕಿರಣ ಹೆಚ್.ಡಿ.ಕೆ

ದೇವನಹಳ್ಳಿ: ನನ್ನ ಅಭಿಮಾನಿಗಳು, ಕಾರ್ಯಕರ್ತರು ಹಣ ಖರ್ಚು ಮಾಡಿಕೊಂಡು ನನ್ನಲ್ಲಿಗೆ ಬರುವುದು ಬೇಡ. ನೀವಿದ್ದಲ್ಲಿಯೇ ಬಡವರಿಗೆ, ದೀನ ದಲಿತರಿಗೆ, ಮಳೆ-ನೆರೆಯಿಂದ ತತ್ತರಿಸಿದ ಜನರಿಗೆ ನೆರವಾಗುವ ಮೂಲಕ ನನ್ನ ಜನ್ಮದಿನವನ್ನು ಸೇವಾ ಚಟುವಟಿಕೆ ಮಾಡುವ ಮೂಲಕ ಆಚರಿಸಬೇಕೆಂದು ನೀಡಿದ ಸೂಚನೆ ಮೇರೆಗೆ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಕಾರ್ಯ ಮಾಡುತ್ತಿರುವುದಾಗಿ ದೇವನಹಳ್ಳಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡ ತಿಳಿಸಿದರು. ದೇವನಹಳ್ಳಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ತಾಲ್ಲೂಕು ಜೆಡಿಎಸ್ ವತಿಯಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ …

ರೈತರ ಆಶಾಕಿರಣ ಹೆಚ್.ಡಿ.ಕೆ Read More »

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜನ್ಮ ದಿನ: ಯುವ ಕಾಂಗ್ರೆಸ್ ನಿಂದ ಗರ್ಭೀಣಿಯರಿಗೆ ಸಾಮೂಹಿಕ ಸೀಮಂತ ; ಮಾಜಿ ಸಚಿವ ಕೆ.ಜೆ. ಜಾರ್ಜ್, ರಕ್ಷಾ ರಾಮಯ್ಯ ಭಾಗಿ

ಬೆಂಗಳೂರು’ ಡಿ, 9: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಬಾಣಸವಾಡಿಯಲ್ಲಿ ಗರ್ಭೀಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಆಯೋಜಿಸಿತ್ತು. ನಗರದ ಸರ್ವಜ್ಞ ನಗರದ ಬಾಣಸವಾಡಿ ವಾರ್ಡ್ ನ 70 ಕ್ಕೂ ಅಧಿಕ ಗರ್ಭೀಣಿಯರಿಗೆ ಮಾಜಿ ಗೃಹ ಸಚಿವ, ಶಾಸಕ ಕೆ.ಜೆ.ಜಾರ್ಜ್, ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಅವರು ಬಾಗೀನ ನೀಡಿ ಗೌರವಿಸಿದರು. ದೊಡ್ಡ ಬಾಣಸವಾಡಿಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ …

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜನ್ಮ ದಿನ: ಯುವ ಕಾಂಗ್ರೆಸ್ ನಿಂದ ಗರ್ಭೀಣಿಯರಿಗೆ ಸಾಮೂಹಿಕ ಸೀಮಂತ ; ಮಾಜಿ ಸಚಿವ ಕೆ.ಜೆ. ಜಾರ್ಜ್, ರಕ್ಷಾ ರಾಮಯ್ಯ ಭಾಗಿ Read More »

ಮೋದಿಜಿಯವರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

ಹುನಗುಂದ -ಇಲಕಲ್ಲ ಅವಳಿ ತಾಲೂಕುಗಳ ಸಹಯೋಗದಲ್ಲಿ ತಾಲೂಕಿನ ಹಲವಾರು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರ ಹುಟ್ಟುಹಬ್ಬದ ಪ್ರಯುಕ್ತ, ಶ್ರೀ ಗುರುಮಹಾಂತ ಸ್ವಾಮಿಜಿ ಹಾಗು ಶಾಸಕರಾದ ದೊಡ್ಡನಗೌಡ ಜಿ ಪಾಟೀಲ ಹಾಗು ಡಾ|| ಮಹಾಂತೇಶ ಕಡಪಟ್ಟಿ. ಅರವಿಂದ ಮಂಗಳೂರ . ಮಹಾಂತಗೌಡ ಪಾಟೀಲ ಹಲವಾರು ಪ್ರಮುಖರ ಹಾಗು ವೈಧ್ಯರ ಬಳಗದ ನೇತೃತ್ವದಲ್ಲಿ ರಕ್ತಗುಂಪು ತಪಾಸಣೆ ಹಾಗು ಬೃಹತ್ ರಕ್ತದಾನ ಶಿಬಿರ*ಕಾರ್ಯಕ್ರಮ ನಡೆಯಿತು. ಹುನಗುಂದ ನಗರದಲ್ಲಿ ಆಯೋಜನೆ …

ಮೋದಿಜಿಯವರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ Read More »

ಯೋಗಾ ಕುಟುಂಬದ ವತಿಯಿಂದ ಜನ್ಮ ದಿನಾಚರಣೆ ಆಚರಣೆ

ಇಳಕಲ್ : ಯೋಗಾ ಕುಟುಂಬದ ವತಿಯಿಂದ ಮಹಾತ್ಮ ಗಾಂಧಿಜಿ ಹಾಗು ಲಾಲ ಬಹದ್ದೂರ್ ಶಾಸ್ತ್ರಿಜಿ ಅವರ ಜನ್ಮ ದಿನಾಚರಣೆ ಆಚರಣೆ. ನಗರದ ಹುಲಗೇರಿ ರಸ್ತೆಯಲ್ಲಿ , ಯೋಗಾ ಕುಟುಂಬದ ಹೊಸ ಜಾಗ ಉದ್ಘಾಟನೆ ಹಾಗು ಮಹಾತ್ಮ ಗಾಂಧಿಜಿ ಹಾಗು ಲಾಲ ಬಹದ್ದೂರ್ ಶಾಸ್ತ್ರಿಜಿ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಯೋಗಾ ಕುಟುಬದ ಆಡಳಿತ ಮಂಡಳಿ ಹಾಗು ಸದಸ್ಯರುಗಳು ಪಾಲ್ಗೋಂಡು ಸಸಿ ನೇಡುವದರ ಮೂಲಕ ಆಚರಿಸಲಾಯಿತು.

Translate »
Scroll to Top