’ತೋತಾಪುರಿ’ ಟ್ರೇಲರ್‌ಗೆ ಸುದೀಪ್ ಫಿದಾ!

ಬಹು ನಿರೀಕ್ಷೆಯ ’ತೋತಾಪುರಿ’ ಚಿತ್ರದ ಟ್ರೇಲರ್‌ನ್ನು ಇತ್ತೀಚೆಗೆ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ ಟ್ರೇಲರ್ ವೈರಲ್ ಆಗಿದ್ದು, ಒಳ್ಳೆ ರೆಸ್ಪಾನ್ಸ್ ಬರುತ್ತಿದೆ. ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಶನ್‌ನ ಈ ಚಿತ್ರ ಸದ್ಯ ಗಾಂಧಿನಗರದಲ್ಲಿ ದೊಡ್ಡ ಸೌಂಡ್ ಮಾಡುತ್ತಿದೆ. ಚಿತ್ರವನ್ನು ಸುರೇಶ್ ಆಟ್ಸ್ ಬ್ಯಾನರ್ ನಲ್ಲಿ ಕೆ.ಎ ಸುರೇಶ್ ನಿರ್ಮಾಣ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ನಂತರ ಮಾತನಾಡಿದ ಸುದೀಪ್ ’ಇದು ನಂಗೆ ಟ್ರೇಲರ್ ಅನಿಸಲಿಲ್ಲ. ಮನರಂಜನೆ ಅನಿಸಿತು. ಸಂಭಾ?ಣೆ ಹೇಳುವ ರೀತಿ ಚನ್ನಾಗಿದೆ. ಇಂತಹ ಟೈಟಲ್‌ಗಳಲ್ಲಿ ನಾವು ನಟಿಸಿದರೇ ಎರಡು ಟೀಕೆಟ್ ಸಹ ಮಾರಾಟವಾಗುವುದಿಲ್ಲ. ಅದೇ ಜಗ್ಗೇಶ್ ಅವರು ನಟಿಸಿದರೆ, ಎಲ್ಲರು ಸಂತೋಷ ಪಡುತ್ತಾರೆ. ಟ್ರೇಲರ್‌ನಲ್ಲಿ ಡೈಲಾಗ್‌ಗಳನ್ನು ಕೇಳಿದಾಗ ನಂಗೂ ಖುಷಿ ಆಯ್ತು. ಧನಂಜಯ ಒಳ್ಳೆ ನಟ. ಒಳ್ಳೆ ಒಳ್ಳೆ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ ಒಳ್ಳೆ ನಿರ್ಮಾಪಕರು ಸಿಕ್ಕಿದ್ದು, ತಂಡಕ್ಕೆ ಒಳ್ಳೆಯದಾಗಲಿ’ ಎಂದರು. ನಿರ್ದೇಶಕ ವಿಜಯ್ ಪ್ರಸಾದ್ ಮಾತನಾಡಿ ’ಇದೊಂದು ಗಲಬೆ ಇಲ್ಲದ ಪುಟ್ಟ ಪ್ರೇಮ ಕಥೆ ಮತ್ತು ಭಾವನಾತ್ಮಕ ಸಿನಿಮಾ. ಈ ಚಿತ್ರ ಪಲವತ್ತಾದ ಪಲ ಕೊಡುತ್ತದೆ ಎಂಬ ವಿಶ್ವಾಸವಿದೆ. ಸಿನಿಮಾ ಪ್ರಾರಂಭದಲ್ಲೇ ನಾವು ಎರಡು ಭಾಗ ಮಾಡುವುದೇಂದು ಯೋಚನೆ ಮಾಡಿದ್ದೇವು. ಇದೀಗ ಸಿನಿಮಾನೇ ಎಲ್ಲಾ ಭಾಷೆಗೂ ಚಿತ್ರವನ್ನು ತೆಗೆದುಕೊಂಡು ಹೋಗುತ್ತಿದೆ. ಇದು ಯುನಿವರ್ಸಲ್ ಕಥೆಯ ಸಿನಿಮಾ’ ಎನ್ನುವರು.


ಪ್ರಾರಂಭದಲ್ಲೇ ಮಾತನಾಡಿದ ಜಗ್ಗೇಶ್ ’ಸುದೀಪ್ ಟ್ರೇಲರ್ ಲಾಂಚ್ ಮಾಡಿದ್ದು ಖುಷಿ ಇದೆ. ಅವರು ನನ್ನ ’ಪ್ರಿಮಿಯರ್ ಪದ್ಮಿನಿ’ ಸಿನಿಮಾ ನೋಡಿ ಹೊಗಳಿ ಪತ್ರ ಬರೆದಿದ್ದರು. ಅದರಿಂದ ಚಿತ್ರಕ್ಕೆ ಒಳ್ಳೆಯದಾಯಿತು. ಸುದೀಪ್ ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ. ಅವರಿಗೆ ಒಳ್ಳೆಯ ಮನಸು ಇದೆ. ಈ ಚಿತ್ರ ನಿರ್ಮಾಪಕ ಸುರೇಶ್ ತುಂಬಾ ತಾಳ್ಮೆ ಇರುವವರು. ನಿರ್ದೇಶಕರಿಗೆ ಸಿನಿಮಾ ಕೃಷಿ ಮಾಡೋದು ಗೊತ್ತಿದೆ. ತುಂಬಾ ಪೋಲಿಯಾಗಿ ಒಳ್ಳೆ ಕಥೆ ಹೇಳುತ್ತಿದ್ದಾರೆ. ಜಾತಿ ವಿಚಾರ ತೆಗೆದುಕೊಂಡು ತುಂಬಾ ಚನ್ನಾಗಿ ಹ್ಯಾಂಡಲ್ ಮಾಡಿದ್ದಾರೆ. ನಾನಿಲ್ಲಿ ಟ್ರೈಲರ್ ಪಾತ್ರ ಮಾಡಿದ್ದು, ಸಿರಿಯಸ್ ವಿ?ಯವನ್ನು ಹಾಸ್ಯದ ಮೂಲಕ ಹೇಳಲಾಗಿದೆ. ನಾವೆಲ್ಲಾ ಮನು?ರೇ ಎಂಬ ಅಂಶ ಚಿತ್ರದಲ್ಲಿದ್ದು, ಕಥೆಯಲ್ಲಿ ಬರುವ ಪ್ರತಿಯೊಂದು ಪಾತ್ರ ಮುಖ್ಯವಾಗಿವೆ. ಈ ಸಿನಿಮಾ ನೋಡಿ ಜನ ಎರಡು ದಿನ ಯೋಚನೆ ಮಾಡುತ್ತಾ, ಜನ ಚಿತ್ರವನ್ನು ಮನಸಿನಲ್ಲಿ ಇಟ್ಟುಕೊಳ್ಳುತ್ತಾರೆ. ಎಲ್ಲಾ ಸಿನಿಮಾಗಳು ಕ್ರಿಯೇಟಿವ್ ತಂಡದಲ್ಲಿ ಆಗುತ್ತವೆ. ಆದರೆ ವಿಜಯ್ ಪ್ರಸಾದ್ ಒಬ್ಬರೇ ಕುಳಿತುಕೊಂಡು ಯೋಚನೆ ಮಾಡಿ ಇಂತಹ ಚಿತ್ರ ಮಾಡುತ್ತಾರೆ’ ಎಂದು ಹೇಳಿದರು.


ನಂತರ ಮಾತನಾಡಿದ ಡಾಲಿ ಧನಂಜಯ್ ’ಜರ್ನಿ ಚನ್ನಾಗಿ ಇತ್ತು. ನಾನು ನಿರ್ದೇಶಕರ ಅಭಿಮಾನಿ. ಅವರ ಸಿನಿಮಾಗಳ ಡೈಲಾಗ್‌ಗಳು ಪೋಲಿತರದಿಂದ ಇದ್ದರು ಫ್ಯಾಮಿಲಿ ನೋಡುತ್ತಾರೆ. ನಾನು ಈ ಚಿತ್ರದಲ್ಲಿ ವಿಶೇ?ವಾಗಿ ನಾರಾಯಣ್ ಪಿಳ್ಳೆ ಪಾತ್ರ ಮಾಡಿದ್ದೇನೆ’ ಎನ್ನುವರು. ನಾಯಕಿ ಅದಿತಿ ಪ್ರಭುದೇವ ಮಾತನಾಡಿ, ’ಈ ಚಿತ್ರ ಶೂಟ್ ಮಾಡುವಾಗ ಜಗ್ಗೇಶ್ ಅವರಿಂದ ಸಾಕ? ಕಲಿತಿದ್ದೇನೆ. ಈ ತರ ಡೈಲಾಗ್ ನಾನು ಹೇಳಬೇಕಾ ಸರ್ ಎಂದು ಕೇಳಿದಾಗ ನಿರ್ದೇಶಕರು ತಿಳಿಸಿ ಹೇಳುತ್ತಿದ್ದರು. ನಾನಿಲ್ಲಿ ಬಾಬಿಜಾನ್ ಪಾತ್ರ ಮಾಡಿದ್ದೇನೆ’ ಎನ್ನುವರು. ಅನೂಪ್ ಸಿಳಿನ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ತಾರಾಗಣದಲ್ಲಿ ದತ್ತಣ್ಣ, ಚಸ್ವಾ, ವೆಂಕಟ್ ರಾವ್, ರಾಜೇಶ್ವರಿ, ರಾಜೇಶ್, ಹೇಮಾ ದತ್, ವೀಣಾ ಸುಂದರ, ವತ್ಸಲಾ ಮೋಹನ್, ಶ್ರೀಕಾಂತ್ ಗಣೇಶ್ ಮುಂತಾದವರು ಇದ್ದಾರೆ.

Leave a Comment

Your email address will not be published. Required fields are marked *

Translate »
Scroll to Top