ಮಾ.26 ರಂದು ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ

ಕೊಪ್ಪಳಮಾ.,23 ,: ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ ನೂತನ ಪತ್ರಿಮೆಯ ಅನಾವರಣ ಕಾರ್ಯಕ್ರಮ ಮಾ. 26 ಶನಿವಾರ ಬೆಳಗ್ಗೆ 10.30ಕ್ಕೆ ಜರುಗಲಿದೆ ಎಂದು ಛಲವಾದಿ ಸಮಾಜದ ಕ್ಷೇಮಾಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಜಿ.ಎಮ್ ಬೆಲ್ಲದ್ ಹೇಳಿದರು. ಬುಧವಾರ ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮಾರ್ಚ್ 25ರ ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರ ಮೆರವಣಿಗೆ ನಡೆಯಲಿದ್ದು, ಕೊಪ್ಪಳ ತಾಲೂಕ ಪಂಚಾಯತಿಯಿಂದ ಅಶೋಕ ಸರ್ಕಲ್‌ ಮಾರ್ಗವಾಗಿ ಗಡಿಯಾರ ಕಂಬದ ಮುಖಾಂತರ ಅಂಬೇಡ್ಕರ್ ಸರ್ಕಲ್ ನಲ್ಲಿ ಬಂದು ಸೇರಲಿದೆ. ಕಾರಣ ಸಮಸ್ತ ಜನತೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಅಲ್ಲದೆ ತಪ್ಪದೆ ಶನಿವಾರ ದಿ. 26 ದಂದು ನಡೆಯುವ ಪ್ರತಿಮೆ ಅನಾವರಣದಲ್ಲಿ ಪಾಲ್ಗೊಳ್ಳುವಂತೆ ಕೋರಿದರು.


ಬಳಿಕ ಛಲವಾದಿ ಸಮಾಜದ ಮುಖಂಡ ಮತ್ತು ನಗರಸಭೆ ಸದಸ್ಯ ಮುತ್ತುರಾಜ್ ಕುಷ್ಟಗಿ ಮಾತನಾಡಿ, ಬಹಳ ವರ್ಷಗಳ ಪತ್ರಿಮೆ ನಿರ್ಮಾಣದ ಕನಸು ಇದೀಗ ನನಸಾಗುತ್ತಿದೆ. ಪತ್ರಿಮೆ ನಿರ್ಮಾಣದ ಖರ್ಚುನ್ನು ಶಾಸಕರು ನೀಡಿದ್ದು ಅವರಿಗೆ ನಾವು ಧನ್ಯವಾದಗಳು ಅರ್ಪಿಸುತ್ತೇವೆ ಎಂದರು. ಇನ್ನು ಕಾರ್ಯಕ್ರಮದಲ್ಲಿ ಸಂಸದ ಕರಡಿ‌ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ನಗರಸಭೆ ಅಧ್ಯಕ್ಷರು, ಸದಸ್ಯರು , ದಲಿತ ಸಮುದಾಯ ಮುಖಂಡರು ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದ ವಿಶೇಷ ಉಪನ್ಯಾಸವನ್ನು ಸಾಹಿತಿಗಳಾದ ವಿಠ್ಠಲ ವಗ್ಗನ್ ಮಾಡಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜಗದೀಶ ಛಲವಾದಿ, ಗವಿಸಿದ್ದಪ್ಪ ಬೆಲ್ಲದ್, ಗವಿಸಿದ್ದಪ್ಪ ಛಲವಾದಿ, ಹನುಮಂತಪ್ಪ, ಶಾಂತಕುಮಾರ್ ಸೋಂಪುರು, ಕಾಶಪ್ಪ ಅಳ್ಳಳ್ಳಿ, ರಮೇಶ ಬೆಲ್ಲದ ಸೇರಿದಂತೆ ಛಲವಾದಿ ಸಮಾಜದ ಕ್ಷೇಮಾಭಿವೃದ್ಧಿ ಸೇವಾ ಸಂಘದ ನಿರ್ದೇಶಕರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top