“ಚಿಗುರು” ಪುಸ್ತಕ ಕುರಿತು “ಸಂವಾದ” ಕಾರ್ಯಕ್ರಮ

ಚಳಗೇರಾ : ಸರಕಾರಿ ಪ್ರೌಢಶಾಲೆ ಚಳಗೇರಾ, ಪ್ರೌಢಶಾಲೆಯಲ್ಲಿ ಎಸ್,ಎಸ್,ಎಲ್,ಸಿ, ವಿದ್ಯಾರ್ಥಿಗಳಿಗೆ ನೀಡಲಾದ “ಚಿಗುರು” ಪುಸ್ತಕದ ಸದ್ಬಳಕೆ ಹಾಗೂ ಅಂಕಗಳು ಹೆಚ್ಚಿಗೆ, ಪಡೆಯಲು ಹೇಗೆ ಸಹಕಾರಿ ಎಂಬುದನ್ನು ಕುರಿತು, ಶಿಕ್ಷಕರಾದ ಶಾಕೀರ್ ಬಾಬಾ ರವರು  ವಿವರಿಸಿ,ಗುಂಪು ಅಧ್ಯಯನದೊಂದಿಗೆ, ರಸಪ್ರಶ್ನೆಗಳ ಸಹಾಯದಿಂದ ಅನೇಕ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಕೆಲವು ಚಟುವಟಿಕೆಗಳನ್ನು ನೀಡಿ ಅದರ ಮೂಲಕ ಕ್ಲಿಪ್ಟ  ವಿಷಯಗಳನ್ನು ಮನನ ಮಾಡಿಸುವುದನ್ನು ತಿಳಿಸಿಕೊಟ್ಟರು. ಅದೇ ರೀತಿ ರಂಗೋಲಿ ಹಾಕುವುದರ ಮೂಲಕ ಗಣಿತದ ಸುಲಭ ಕಲಿಕೆಯ ಸಾಧ್ಯ ಎಂಬುದನ್ನು ಮನ-ಮುಟ್ಟುವಂತೆ ತಿಳಿಸಿಕೊಟ್ಟರು.

ಪರೀಕ್ಷಾ “ಭಯ ನಿವಾರಣೆ” ಕುರಿತಂತೆ 75 ದಿನದ ಕ್ರಿಯಾಯೋಜನೆಯನ್ನು ಹಮ್ಮಿಕೊಂಡಿದ್ದು, ಎಲ್ಲ ವಿದ್ಯಾರ್ಥಿಗಳು ಪಾಸಾಗುವಂತೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಕಲಿಕಾ ಮಿತ್ರ’ದ ತಂಡ ಸದಸ್ಯರು ಆಗಿರುವ ಶಾಕೀರ್ ಬಾಬಾ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ರಾಯಪ್ಪ ಹೂಗಾರ, ವಿಶಾಲಾಕ್ಷಮ್ಮ, ಅರವಿಂದಕುಮಾರ ದೇಸಾಯಿ,  ಶರಣಪ್ಪ ಪರಸಾಪುರ, ಸಿದ್ದನಗೌಡ ಪೊಲೀಸ್ ಪಾಟೀಲ್,  ಬಸವರಾಜ ಪಿ, ಯಂಕವ್ವ ವಡ್ಡರ, ವಿಜ್ಞಾನ ಸಹಾಯಕಿ ಶರೀಫಾ-ಬಿ, ಪ್ರಶಿಕ್ಷಣಾರ್ಥಿಗಳಾದ ಲಾಲ್ ಮಹಮ್ಮದ್ ಅತ್ತಾರ್, ವೀರೇಶ್ ಹಾದಿಮನಿ, ಪೂರ್ಣಿಮಾ ಅರಹುಣಸಿ, ಮಂಜುಳಾ ಗುರುವಿನ ಇದ್ದರು.

Leave a Comment

Your email address will not be published. Required fields are marked *

Translate »
Scroll to Top