‘ಆರ್‌ಆರ್‌ಆರ್’

ಬೆಂಗಳೂರು: ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿಯ ಬಹುನಿರೀಕ್ಷಿತ ‘ಆರ್‌ಆರ್‌ಆರ್’ ಸಿನಿಮಾವು ಈಗಾಗಲೇ ಕೆಲವು ವಿಚಾರಗಳಿಂದ ಸಿನಿಮ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ. ಬರುವ ವರ್ಷ ಜನವರಿ ೭ರಂದು ತೆರೆಗೆ ಅಪ್ಪಳಿಸಲಿರುವ ಬಿಗ್ ಬಜೆಟ್ ನ ಸಿನಿಮಾ ಈಗಾಗಲೆ ಸಜ್ಜಾಗಿದೆ. ಆಗಲೆ ಪೋಸ್ಟರ್, ಟೀಸರ್ ಗಳಿಂದ ಭಾರಿ ಗಮನ ಸೆಳೆದಿರುವ ಈ ಚಿತ್ರವನ್ನು ವೀಕ್ಷಿಸಲು ಕೋಟ್ಯಂತರ ಅಭಿಮಾನಿಗಳು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ.

ನಿದೇಶಕ ರಾಜಮೌಳಿಗೂ ಹಾಗೂ ಕರ್ನಾಟಕಕ್ಕೂ ವಿಶೇಷ ಬಾಂಧವ್ಯವಿದೆ ಏಕೆಂದರೆ ರಾಯಚೂರಿನಲ್ಲಿ ಜನಿಸಿರುವ ರಾಜಮೌಳಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇಡೀ ವಿಶ್ವದ ಗಮನ ಸೆಳೆಯುವ ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿ ಸಿನಿಪ್ರಿಯರಿಗೆ ನೀಡಿದ್ದಾರೆ. ಇವರ ನಿರ್ದೇಶನದ ‘ಈಗ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟಿಸಿ ಮಿಂಚಿದ್ದರು. ಬಳಿಕ ‘ಬಾಹುಬಲಿ-೧’ರಲ್ಲಿಯೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಸುದೀಪ್ ಗಮನ ಸೆಳೆದಿದ್ದರು. ಇದೀಗ ರಾಜಮೌಳಿಯವರ ಸಿನಿಮಾದಲ್ಲಿ ಮತ್ತೋರ್ವ ಕನ್ನಡದ ನಟ ಬಣ್ಣ ಹಚ್ಚಿದ್ದಾರೆ. ಅವರ್‍ಯಾರಯ ಎಂಬುದುನನು ತಿಳಿಯಲು ಸಿನಿಮಾ ನೋಡಲೇಬೇಕು ಎಂದು ಈ ಮೂಲಕ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top