ಬೃಹತ್ ಗೋಮಾಂಸ ಅಡ್ಡೆ ಮೇಲೆ ಪೊಲೀಸರ ದಾಳಿ, ಟನ್ ಗಟ್ಟಲೆ ಗೋಮಾಂಸ ವಶ

ತುಮಕೂರು : ತುಮಕೂರು ನಗರದಲ್ಲಿ ಬೃಹತ್ ಗೋಮಾಂಸ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಟನ್ ಗಟ್ಟಲೆ ಗೋಮಾಂಸ ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.

ತುಮಕೂರು ನಗರದ ಮರಳೂರು ದಿನ್ನೆಯ 12ನೇ ಕ್ರಾಸ್ ನ  ಮನೆಯೊಂದರಲ್ಲಿ ಅಕ್ರಮವಾಗಿ ಕಸಾಯಿ ಖಾನೆ ಮಾಡಿಕೊಂಡು ಗೋಮಾಂಸ ಮಾರಾಟ ಮಾಡುತ್ತಿದ್ದ  ಮನೆ ಮೇಲೆ ದಾಳಿ ಮಾಡಿದ್ದು ಮನೆಯಲ್ಲಿ ಇದ್ದ ಬೃಹತ್ ಗೋಮಾಂಸ ಕಂಡು ಪೊಲೀಸರ ದಂಗಾಗಿದ್ದಾರೆ.

 

ಇನ್ನು ಅಮಿತ್ ಎಂಬುವವರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಸರ್ದಾರ್ ಎಂಬುವವರ ಕಟ್ಟಡದಲ್ಲಿ  ಅಕ್ರಮವಾಗಿ ಗೋಮಾಂಸ ಮಾರುತಿದ್ದ ವಿಷಯ ತಿಳಿದ ಪೊಲೀಸರು ದಿಡೀರ್ ದಾಳಿ ನಡೆಸಿದ್ದಾರೆ ಇನ್ನು ದಾಳಿ ವೇಳೆ ಕಸಾಯಿ ಖಾನೆಯ ಕೆಲಸಗಾರರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕಳೆದ ಮೂರು ತಿಂಗಳ ಹಿಂದೆ ಬಾಡಿಗೆ ಪಡೆದಿದ್ದ ವ್ಯಕ್ತಿಯಿಂದ ಆಕ್ರಮವಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿತ್ತು ಎನ್ನುವ ಆರೋಪ ಕೇಳಿ ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್ಪೇಟೆ ಮೂಲಕ ಹೊನ್ನುಡಿಕೆ ಗ್ರಾಮದ ಮೂಲಕ ಹಸುಗಳನ್ನು ತಂದು ಕಸಾಯಿ ಖಾನೆ ನಡೆಸುತ್ತಿದ್ದರು ಎನ್ನಲಾಗಿದೆ.

ಇನ್ನು ಬೃಹತ್ ಗೋಮಾಂಸ ಕಂಡು ಗಂಗಾಧ ಪೊಲೀಸರು ತುಮಕೂರು ಮಹಾನಗರ ಪಾಲಿಕೆ ಯ ವಾಹನದಲ್ಲಿ ಗೋಮಾಂಸವನ್ನು ಕೊಂಡೊಯ್ದಿದ್ದಾರೆ.

 

ತುಮಕೂರು ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಸರ್ಕಲ್ ಇನ್ಸ್ಪೆಕ್ಟರ್ ಪುರುಷೋತ್ತಮ್ ಹಾಗೂ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top