ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ

ವಿಜಯನಗರ :  ದೀಪಾವಳಿ ಹಬ್ಬದ ಹಿನ್ನೆಲೆ  ಕದ್ದು ಮುಚ್ಚಿ ಇಸ್ಪೀಟ್  ಆಡುತ್ತಿದ್ದ ಅಡ್ಡೆಗಳ  ಮೇಲೆ ಪೊಲೀಸರ ದಾಳಿ ನಡೆಸಿ ಜಿಲ್ಲಾದ್ಯಂತ ಒಟ್ಟು 31 ಕೇಸ್ ದಾಖಲು ಮಾಡಿದ್ದು, 168 ಜನರ ಬಂಧನ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಎಸ್ಪಿ ಅವರು, ಇಸ್ಪೀಟ್‍ ಅಡ್ಡೆಗಳ ಮೇಲೆ ದಾಳಿ ಪೊಲೀಸರಿಂದ 168 ಮಂದಿಯನ್ನು ಬಂದಿಸಿ

ಅವರಿಂದ 2,56,335 ಹಣ ಮತ್ತು 24 ದ್ವಿಚಕ್ರ ವಾಹನಗಳು ವಶಪಡಿಸಿಕೊಂಡಿದ್ದಾರೆ.  ಒಂದೇ ದಿನದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ವಿಜಯನಗರ ಜಿಲ್ಲಾ ಪೊಲೀಸರು ಬೃಹತ್ ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ ಎಂದು ವಿಜಯನಗರ ಎಸ್ಪಿ ಡಾ.ಅರುಣ್ ಕೆ. ಮಾಹಿತಿ ನೀಡಿದ್ದಾರೆ

Leave a Comment

Your email address will not be published. Required fields are marked *

Translate »
Scroll to Top