ಪೋಲಿಸ್ ಕ್ರೀಡಾಕೂಟ : ಪ್ರಧಾನ ಜಿಲ್ಲಾ ,ಸತ್ರ ನ್ಯಾಯಾಧೀಶರಿಂದ ಚಾಲನೆ

ಕೊಪ್ಪಳ,: ಕ್ರೀಡೆಯಲ್ಲಿ ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಿ. ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ ದೈಹಿಕ ಕ್ಷಮತೆ ಕಾಪಾಡಿಕೊಳ್ಳಿ
ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಶ್ರೀಮತಿ ಎಲ್.ವಿಜಯಲಕ್ಷ್ಮೀದೇವಿ ಅವರು ಹೇಳಿದರು. ಶನಿವಾರ ನಗರದಲ್ಲಿ ಪೋಲಿಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯ ಪೋಲಿಸ್ ಇಲಾಖೆಯ ಸಾಧನೆಗೆ ಅಭಿನಂದನೆ ಸಲ್ಲಿಸಿ, ಜಿಲ್ಲಾ ಪೊಲೀಸ್ ಅದೀಕ್ಷಕರಾದ ಟಿ.ಶ್ರೀಧರ ಅವರ ಉತ್ತಮ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಲೋಕ ಅದಾಲತ್ ಕುರಿತು ಮಾತನಾಡಿದ ಅವರು ಜಾಗೃತಿ ಮೂಡಿಸಲು ಕರೆ ನೀಡಿದರು.

ಈ ಸಮಯದಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ಅದೀಕ್ಷಕರಾದ ಟಿ.ಶ್ರೀಧರ, ಗಂಗಾವತಿ ಡಿಎಸ್ಪಿ ರುದ್ರೇಶ ಎಸ್.ಉಜ್ಜನಿಕೊಪ್ಪ, ಕೊಪ್ಪಳ ಡಿಎಸ್ಪಿ ಗೀತಾ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಹಾಂತೇಶ ಪಾಟೀಲ ಮೈನಳ್ಳಿ, ಆರೋಗ್ಯ ಅಧಿಕಾರಿ ಡಾ.ಈಶ್ವರ ಸವಡಿ ಸೇರಿದಂತೆ ಕೊಪ್ಪಳ ಜಿಲ್ಲೆಯ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ನಂತರ ವಿವಿಧ ಕ್ರೀಡೆಗಳಿಗೆ ಚಾಲನೆ ನೀಡಲಾಯಿತು.

ವರದಿ : ಶಿವಕುಮಾರ್ ಹಿರೇಮಠ , ಕೊಪ್ಪಳ

Leave a Comment

Your email address will not be published. Required fields are marked *

Translate »
Scroll to Top