ರಾಷ್ಟ್ರೀಯ ಏಕತಾ ದಿನಾಚರಣೆ ಆಚರಣೆ ಮಾಡಿದ ಗ್ರಹ ರಕ್ಷಕ ಸಿಬ್ಬಂದಿ

ಕುಷ್ಟಗಿ : ಇಂದು ಕುಷ್ಟಗಿಯ ತಾಲೂಕು ಗೃಹ ರಕ್ಷಕದಳದ ಕಛೇರಿಯಲ್ಲಿ ತಾಲೂಕು ಕ್ರೀಡಾಂಗಣದ ಆವರಣದಲ್ಲಿ ಮಾನ್ಯ ಡಿ.ಜಿ.ಪಿ.ಗೃಹ ರಕ್ಷಕದಳ ಇಲಾಖೆ ಆದೇಶದಂತೆ ಜಿಲ್ಲಾ ಸಮಾದೇಷ್ಟರಾದ ಗವಿಸಿದ್ದಪ್ಪ ಅವರ ಸೂಚನೆ ಹಿನ್ನೆಲೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನುಮದಿನದ ಪ್ರಯುಕ್ತ “ರಾಷ್ಟ್ರೀಯ ಏಕತಾ ” ದಿನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಎಕತಾ ದಿನದ ಪ್ರತಿಜ್ಞೆ ಯನ್ನು ಸೀನಿಯರ್ ಪ್ಲಟೂನ ಕಮಾಂಡರ್ ರವಿಂದ್ರ ಬಾಕಳೆ .ಗೃಹ ರಕ್ಷಕರಿಗೆ ಬೋಧಿಸಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗೃಹ ಮಂತ್ರಿಯಾಗಿ ಮಾಡಿದ ಸೇವೆ ಅಮೂಲ್ಯವಾದದ್ದು.ಎಂದು ಹೇಳಿದರು. ಗೃಹ ರಕ್ಷಕದಳದ ಪ್ಲಟೂನ ಕಮಾಂಡರ್ ನಾಗರಾಜ ಬಡಿಗೇರೆ, ಘಟಕಾಧಿಕಾರಿ ಶಿವಪ್ಪ ಚೂರಿ, ಸೇರಿದಂತೆ ಘಟಕದ ಎಲ್ಲಾ ಗೃಹ ರಕ್ಷಕರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top