ಬೆಂಗಳೂರು: ಆಪರೇಷನ್ ಕಮಲ ಪ್ರಯತ್ನ ಕೇವಲ ರಾಜ್ಯದಲ್ಲಿ ಮಾತ್ರ ಅಲ್ಲ, ಇಡೀ ದೇಶದಲ್ಲಿ ಮಾಡ್ತಿದ್ದಾರೆ. ವಾಮಮಾರ್ಗದ ಮೂಲಕ ಹೇಗಾದ್ರು ಮಾಡಿ ಸರ್ಕಾರದಲ್ಲಿ ಇರಬೇಕು ಅನ್ನೋದು ಅವರ ಉದ್ದೇಶ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ಅವರು ಈ ದೇಶದ ರಾಜಕೀಯ ವ್ಯವಸ್ಥೆ ನಾಶ ಮಾಡ್ತಿದ್ದಾರೆ. ಜನ ಅವರನ್ನ ತಿರಸ್ಕಾರ ಮಾಡಿ ಸೋಲಿಸಿ ಮನೆಗೆ ಕಳಿಸಿದ್ದಾರೆ. ಅವರು ಜವಾಬ್ದಾರಿಯುತ ವಿಪಕ್ಷವಾಗಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ.. ವಿರೋಧ ಪಕ್ಷದ ನಾಯಕನನ್ನೇ ಅವರು ಆಯ್ಕೆ ಮಾಡಿಕೊಳ್ಳೊದೆ ಬೇಜಾವಾಬ್ದಾರಿಯಾಗಿ ನಡೆದುಕೊಳ್ತಿದ್ದಾರೆ. ಬಿಜೆಪಿ ಅವರು ವಿರೋಧ ಪಕ್ಷಕ್ಕೆ ಕಳಂಕ. ಇದು ನಾಚಿಕೆಗೇಡಿನ ಸಂಗತಿ. ವಿರೋಧಿ ಪಕ್ಷ ನಾಯಕ ಇಲ್ಲ. ಮೇಲ್ಮನೆ ನಾಯಕ ಇಲ್ಲ. 4 ವರ್ಷ ಸರ್ಕಾರ ಮಾಡಿದ್ರು ಜನ ಅವರನ್ನ ಹೀನಾಯವಾಗಿ ಸೋಲಿಸಿದ್ದಾರೆ. ಇದನ್ನ ಅರಿತುಕೊಂಡು ಈಗಲಾದ್ರು ಸರಿಯಾಗಿ ಕೆಲಸ ಮಾಡೋದು ಬಿಟ್ಟು ಆಪರೇಷನ್ ಕಮಲಕ್ಕೆ ಹೈ ಹಾಕಿದ್ದಾರೆ. ಇಂತಹ ಕೆಳಮಟ್ಟಕ್ಕ ಇಳಿದಿದೆ ಅನ್ನೋದಕ್ಕೆ ಇದಕ್ಕಿಂತ ಉದಾಹರಣೆ ಇಲ್ಲ. ಜನ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ ಅವರು ಏನೇ ಪ್ರಯತ್ನ ಮಾಡಲಿ. ಸರ್ಕಾರ ಸುಭದ್ರವಾಗಿರಲಿದೆ ಎಂದರು.

ಬಿಜೆಪಿ ಅವರ ಬಳಿ ಬೇಕಾದಷ್ಟು ಹಣ ಇದೆ. ಎಷ್ಟು ಕೋಟಿ ಬೇಕಾದ್ರು ಅವರಿಗೆ ಕೊಡೋಕೆ ಹಣ ಇದೆ. 100 ಕೋಟಿ, 1000 ಕೋಟಿ ಬೇಕಾದ್ರು ಖರ್ಚು ಮಾಡ್ತಾರೆ. ದುಡ್ಡಿನ ಅಹಂ, ಅಧಿಕಾರದ ಅಹಂ ಇದೆ. ಕೇಂದ್ರ ಸರ್ಕಾರ IT, ED,CBI ನಮ್ಮ ಜೇಬಿನಲ್ಲಿ ಇದೆ. ಎಲ್ಲರನ್ನು ಏನ್ ಬೇಕಾದ್ರು ಮಾಡಬಹುದು ಅಂತ ತಿಳಿದುಕೊಂಡಿದ್ದಾರೆ. ಪಂಚರಾಜ್ಯ ಚುನಾವಣೆ ಆಗಲಿ. ಆಗ ಇನ್ನು ಹೆಚ್ಚು ಮಾತಾಡೋಣ. ಜನ ಬಿಜೆಪಿ, ಮೋದಿ ಆಡಳಿತ ನೋಡಿ ಆಯ್ತು. ಜನರ ಬದುಕಲ್ಲಿ ಏನು ಬದಲಾವಣೆ ಆಗಿದೆ ಅಂತ ಜನರಿಗೆ ಗೊತ್ತಾಗಿದೆ. ಜನರೇ ಸರಿಯಾದ ಪಾಠ ಕಲಿಸ್ತಾರೆ ಎಂದರು.
ಪರಮೇಶ್ವರ್ ಮನೆಯಲ್ಲಿ ಸಿಎಂ ಸಭೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಸಿಎಂ ಯಾರ ಮನೆಗೂ ಹೋಗಬಾರದಾ? ಅವರ ಮನೆ ಬಿಟ್ಟು ಯಾರ ಮನೆಗೂ ಹೋಗಬಾರದಾ? ಯಾರ ಮನೆಯಲ್ಲಿ ಊಟ ಮಾಡಬಾರದಾ? ಹೋಗಿದ ಕೂಡಲೇ ವಿಶೇಷ ಅರ್ಥ ಕಲ್ಪಿಸೋದು ಬೇಡ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರ : ಜೋಶಿ ಅವರು ಮೊದಲು ಅವರ ಮನೆ ಸರಿ ಮಾಡಿಕೊಳ್ಳೋಲಿ ಸಾಕು. ಜೋಶಿ ಅವರು ಇದರ ಬಗ್ಗೆ ಮಾತಾಡೋ ಅವಶ್ಯಕತೆ ಇಲ್ಲ. ಈಗ ಲೋಕಸಭೆ ಚುನಾವಣೆ ಬರ್ತಿದೆ ಅದರ ಬಗ್ಗೆ ಗಮನ ಕೊಡಲಿ. ಮಾಧ್ಯಮಗಳ ಮುಂದೆ ಏನೋ ಹೇಳಿ ಹೋದ್ರೆ ಪ್ರಯೋಜನ ಇಲ್ಲ. ಅವರ ಪಕ್ಷದಲ್ಲಿ ಅಧ್ಯಕ್ಷ, ವಿರೋಧ ಪಕ್ಷ ಮಾಡೋಕೆ ಜೋಶಿ ಅವರಿಗೆ ಯೋಗ್ಯತೆ ಇಲ್ಲ. ಅವರು ಯಾಕೆ ನಮ್ಮ ಜೊತೆ ಮಾತಾಡಬೇಕು. ಅವರಲ್ಲಿ ಎಷ್ಟು ಭಿನ್ನಮತ ಇದೆ ನೋಡಿ. ನಾಯಕನ್ನನ್ನೆ ಮಾಡೋಕೆ ಅಸಾಧ್ಯ ಅಂದ್ರೆ ಅವರಿಗೆ ನಮ್ಮ ಬಗ್ಗೆ ಮಾತಾಡೋಕೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.