ರಾಜ್ಯ ಕುರಿಗಾಹಿಗಳ ನಿಯೋಗದಿಂದ ಸಚಿವ ಕೆ ಎಸ್ ಈಶ್ವರಪ್ಪ ಭೇಟಿ

ಬೆಂಗಳೂರು,ಫೆ,18 : ಇಂದು ಬೆಳಿಗ್ಗೆ ಕರ್ನಾಟಕ ರಾಜ್ಯ ಕುರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ *ಶ್ರೀ ಶರಣು ತಳ್ಳಿಕೇರಿ, ಮತ್ತು ಮುಖಂಡರಾದ ಆನೇಕಲ್ ದೊಡ್ಡಯ್ಯ, ಶ್ರೀ ಕಾಶೀನಾಥ್ ಹುಡೇದ್, ಅವರೊಂದಿಗೆ ರಾಜ್ಯದುದ್ದಗಲದಿಂದ ಆಗಮಿಸಿದ್ದ ಸುಮಾರು ನೂರಾರು ಕುರಿಗಾಹಿಗಳು ತಮ್ಮ ತಮ್ಮ ಸಮಸ್ಯೆಗಳ ಕುರಿತು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ *ಶ್ರಿ ಕೆ,ಎಸ್,ಈಶ್ವರಪ್ಪರವರೊಂದಿಗೆ * ಚರ್ಚಿಸಿ ಮುಂದಿನ ಬಜೆಟ್ ನಲ್ಲಿ ಕುರಿಗಾಹಿಗಳಿಗೆ ಅನುಕೂಲಕರವಾದ ಯೋಜನೆಗಳನ್ನು ರೂಪಿಸುವಂತೆ ಮನವಿಪತ್ರ ಸಲ್ಲಿಸಿದರು.

ತದನಂತೆ ಸಚಿವರು ಮಾತನಾಡಿ ಈಗಾಗಲೇ ನಿಗಮದ ಅಧ್ಯಕ್ಷರ ಮನವಿ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳೊಡನೆ ಒಂದು ಸುತ್ತಿನ ಮಾತುಕತೆ ಮಾಡಿದ್ದೇವೆ
ಇನ್ನೂ ಒಮ್ಮೆ ಅಧ್ಯಕ್ಷರು ಮತ್ತು ಕೆಲವು ಮುಖಂಡರುಗಳನ್ನು ಮುಖ್ಯಮಂತ್ರಿಗಳನ್ನೂ ಭೇಟಿ ಮಾಡಿ ವಿಸ್ತ್ರತವಾಗಿ ಚರ್ಚಿಸಿ. ಅತ್ಯಂತ ಹೆಚ್ಚಿನ ರೀತಿಯಲ್ಲಿ
ಸರ್ಕಾರದಿಂದ ನಮ್ಮ ಕುರಿಗಾಹಿಗಳಿಗೆ ಅನುಕೂಲ ಮಾಡಿಕೊಡಲು ನಾವು ಸದಾ ಸಿದ್ದರಿದ್ದೇವೆ ಎಂದು ತಿಳಿಸಿದರು.

Leave a Comment

Your email address will not be published. Required fields are marked *

Translate »
Scroll to Top