ಹೆಚ್.ಡಿ.ಕೋಟೆ ವಾಲ್ಮೀಕಿ ಭವನದ ಅಭಿವೃದ್ಧಿಗೆ ಕೋಟಿ ರೂ ಮುಂಜೂರು ಮಾಡಿದ ಸಚಿವ ಬಿ.ನಾಗೇಂದ್ರ

ಹೆಚ್.ಡಿ.ಕೋಟೆ:  ಹೆಚ್.ಡಿ.ಕೋಟೆ ಪ್ರವಾಸದ ವೇಳೆ ಶಾಸಕ ಅನಿಲ್ ಚಿಕ್ಕ ಮಾದು ಅವರ ಜೊತೆ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನಕ್ಕೆ ಬೇಟಿ ನೀಡಿದ ಪರಿಶಿಷ್ಟ ಪಂಗಡ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ ಅವರು ಪರಿಶೀಲಿಸಿದರು.

ಈ ವೇಳೆ ತಾಲ್ಲೂಕು ವಾಲ್ಮೀಕಿ ಸಮುದಾಯದ ವತಿಯಿಂದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಬಿ.ನಾಗೇಂದ್ರ ಅವರನ್ನ ಸನ್ಮಾನಿಸಿದರಲ್ಲದೆ ವಾಲ್ಮೀಕಿ ಸಮುದಾಯ ಭವನದ ಅಭಿವೃದ್ದಿಗಾಗಿ ಎರಡು ಕೋಟಿ ಅನುದಾನ ನೀಡುವಂತೆ ಮನವಿ ಪತ್ರ ಸಲ್ಲಿಸಿದರು.

ಸಮುದಾಯದ ಮುಖಂಡರ ಮನವಿಗೆ ಸ್ಪಂದಿಸಿದ ಸಚಿವರು ಸ್ಥಳದಲ್ಲಿ ಕೋಟಿ ರೂ ಮುಂಜೂರು ಮಾಡಿದರಲ್ಲದೆ, ಉಳಿದ ಕೋಟಿ ರೂ ಅನುದಾನವನ್ನ ಹಂತ ಹಂತವಾಗಿ ಬಿಡುಗಡೆ ಮಾಡಲು ಸೂಚಿಸಲಾಗುವುದು ಎಂದು ಭರವಸೆ ನೀಡಿದ ಸಚಿವರು ಸ್ಥಳೀಯ ಶಾಸಕ ಅನಿಲ್ ಚಿಕ್ಕಮಾದು ನಾನು ಸೇರಿ ಮುಖ್ಯಮಂತ್ರಿ ‌ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನ ಕರೆತಂದು ಭವನ ಉದ್ಘಾಟಿಸುತ್ತೇವೆ ಎಂದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top