ಬಳ್ಳಾರಿ: ಶನಿವಾರ ಬೆಳಂಬೆಳಗ್ಗೆ ಲೋಕಾಯುಕ್ತ ಪೆÇಲೀಸರು ಏಕಕಾಲಕ್ಕೆ ಬಳ್ಳಾರಿ ಪಿಡಬ್ಲ್ಯುಡಿ ಸೆಕ್ಷನ್ ಇಂಜಿನೀಯರ್ ಅಮೀನ್ ಮುಕ್ತಾರ್ ಅವರ ಕಚೇರಿ, ನಿವಾಸಗಳ ಮೇಲೆ ದಾಳಿ ನಡೆದಿದೆ.ಅಮೀನ್ ಮುಕ್ತಾರ್ ಅವರ ಕಲಬುರ್ಗಿ ನಿವಾಸ ಹಾಗೂ ಬಳ್ಳಾರಿಯ ಕಚೇರಿಯ ಮೇಲೂ ದಾಳಿ ನಡೆಸಿರುವ ಲೋಕಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಅಧಿಕಾರಿಯ ಕಲಬುರ್ಗಿ ನಿವಾಸದಲ್ಲಿ ಸಾಕಷ್ಟು ಪ್ರಮಾಣದ ಆಸ್ತಿ ಪತ್ತೆ ಹಿನ್ನೆಲೆ ಪರಿಶೀಲನೆಯ ತೀವ್ರತೆ ಹೆಚ್ಚಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಅಮೀನ್ ಮುಕ್ತಾರ್ ಅವರ ಕಲಬುರ್ಗಿ ನಿವಾಸ ಹಾಗೂ ಬಳ್ಳಾರಿ ಕಚೇರಿ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ.ಹೊಸಪೇಟೆ ಲೋಕಾಯುಕ್ತ ಇನ್ಸಪೆಕ್ಟರ್ ಅಮರೇಶ್ ಹುಬ್ಬಳಿ ಅವರ ನೇತೃತ್ವದ ತಂಡವು, ಬಳ್ಳಾರಿ ಹೊಸ ಡಿಸಿ ಕಚೆರಿ ಪಕ್ಕದಲ್ಲಿರುವ ಲೋಕೊಪಯೋಗಿ ಇಲಾಖೆಯ ವೃತ್ತ ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದು, ಅಮೀನ್ ಮುಕ್ತಾರ್ ಅವರ ಚೆಂಬರ್ನಲ್ಲಿ ದಾಖಲೆಗಳ ಪರಿಶೀಲನೆ ನಡೆಯತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.