“ಸರ್ಕಾರಿ ಪ್ರೌಢಶಾಲೆ ಚಳಗೇರಾ ದಲ್ಲಿ ಕನ್ನಡ ರಾಜ್ಯೋತ್ಸವ” ಆಚರಣೆ

ಕುಷ್ಟಗಿ:- ಸರ್ಕಾರಿ ಪ್ರೌಢಶಾಲೆ ಚಳಗೇರಾದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಭಕ್ತಿ ಹಾಗೂ ಶ್ರದ್ಧಾಪೂರ್ವಕವಾಗಿ ಪೂಜೆ ಸಲ್ಲಿಸಲಾಯಿತು ಕನ್ನಡ ರಾಜ್ಯೋತ್ಸವ ಕುರಿತು ಕನ್ನಡ ಅಧ್ಯಾಪಕರಾದ ಶ್ರೀ ಸಿದ್ದನಗೌಡ ಪೊಲೀಸ್ ಪಾಟೀಲ್ ಮಾತನಾಡಿ ಕನ್ನಡನಾಡಿನ ಎಲ್ಲರಿಗೂ ಇಂದು ಸಂಭ್ರಮದ ದಿನವಾಗಿದ್ದು ನಾವು ಕನ್ನಡ ತಾಯಿಯ ಸೇವೆ ಮಾಡುವುದರೊಂದಿಗೆ ನಾಡಿನ ಜಲ ನೆಲ ಭಾಷೆಯನ್ನು ಉಳಿಸಿ ಬೆಳೆಸಿ ಕನ್ನಡದ ಸೇವೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.


ನಾವೆಲ್ಲರೂ ಕನ್ನಡ ಭಾಷೆಯಲ್ಲಿ ಬೆಳೆಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಾರಾದ ರಾಯಪ್ಪ ಹೂಗಾರ್ ವಿಶಾಲಕ್ಷಮ್ಮ ಅರವಿಂದ್ ಕುಮಾರ್ ದೇಸಾಯಿ ಶಾಕಿರ್ ಬಾಬಾ ಶರಣಪ್ಪ ಪರಸಾಪುರ ಕರೀಂ ಸಾಹೇಬ್ ಇದ್ದಲಗಿ ಎಚ್ಡಿ ನದಾಫ್ ಶರೀಫಾಭೀ ಇದ್ದರು.

Leave a Comment

Your email address will not be published. Required fields are marked *

Translate »
Scroll to Top