ಶಿಡ್ಲಘಟ್ಟ,,ಜ,10 :‘ಜನತೆಗೆ ಮೂಲಸೌಕರ್ಯಗಳಲ್ಲಿ ಬಹುಮುಖ್ಯವಾಗಿ ಬೇಕಾಗಿರುವ ನೀರಾವರಿ ಯೋಜನೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ, ಮೇಕೆದಾಟು ಯೋಜನೆಯಿಂದ ನೀರು ತರಲಿಕ್ಕಾಗಿ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ’ ಮೇಕೆದಾಟು ಪಾದಯಾತ್ರೆಯಲ್ಲಿ ಪ್ರತಿಯೊಬ್ಬರು ಕೈಜೋಡಿಸಿ ಎಂದು ಎಬಿಡಿ ಗ್ರೂಪ್ ನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಹೇಳಿದರು. ಶಿಡ್ಲಘಟ್ಟ ನಗರದ ಕನಕ ನಗರದಲ್ಲಿರುವ ಎಬಿಡಿ ಗ್ರೂಪ್ ಕಚೇರಿಯಲ್ಲಿ ಆಯೋಜಿಸಿದ್ದ ತಾಲ್ಲೂಕಿನ ಕಾಂಗ್ರೆಸ್ ನಾಯಕರ ಜೊತೆ ನಮ್ಮ ನೀರು ನಮ್ಮ ಹಕ್ಕು ಮೇಕೆದಾಟಿಗೆ ಪಾದಯಾತ್ರೆ’ ಕುರಿತು ಅವರು ಮಾತನಾಡಿದರು.
ಮೇಕೆದಾಟು ಯೋಜನೆಯಿಂದ ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿರುವ 88 ಟಿ.ಎಂ.ಸಿ.ನೀರನ್ನು ನಮಗೆ ಕೊಡಿ ಎನ್ನುವುದು ನಮ್ಮ ಹೋರಾಟವಾಗಿದೆ. ನಾವು ತಮಿಳುನಾಡಿನವರ ಪಾಲು ಕೇಳುತ್ತಿಲ್ಲ. ಪಾದಯಾತ್ರೆಯ ಮೂಲಕ ಪಂಚೇಂದ್ರಿಯಗಳನ್ನು ಕಳೆದುಕೊಂಡಿರುವ ಸರ್ಕಾರವನ್ನು ಎಚ್ಚರಿಸುವಂತಹ ಕೆಲಸ ಮಾಡಲಿಕ್ಕೆ ಹೊರಟಿದ್ದೇವೆ’ ಎಂದರು. ಸಂದರ್ಭದಲ್ಲಿ ಎಬಿಡಿ ಗ್ರೂಪ್ ಸದಸ್ಯರು ಹಾಗೂ ತಾಲ್ಲೂಕಿನ ಎಲ್ಲಾ ಕಾಂಗ್ರೆಸ್ ನಾಯಕರು ಮುಖಂಡರುಗಳು ಹಾಜರಿದ್ದರು.