ಇಂದಿರಾ ಕ್ಯಾಂಟೀನ್’ ಉದ್ಘಾಟನೆಗೆ ಆಡಳಿತಾತ್ಮಕ ವಿಘ್ನ ಉಂಟಾಗಿದೆ.
ಬಜಪೆಯಲ್ಲಿ ಇಂದಿರಾ ಗಾಂಧಿ ಆಟವಾಡಿದ ಜಾಗದಲ್ಲಿ ಅವರ ಹೆಸರಿನ ಕ್ಯಾಂಟೀನ್ ಉದ್ಘಾಟನೆಗೆ ಆಡಳಿತಾತ್ಮಕ ವಿಘ್ನ ಎದುರಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜೂನ್ 4 ರಂದು ಕ್ಯಾಂಟೀನ್ ಉದ್ಘಾಟಿಸಬೇಕಿತ್ತು, ಆದರೆ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಗಿದೆ. 70 ವರ್ಷಗಳ ಹಿಂದೆ ಇಂದಿರಾ ಗಾಂಧಿ ಇಲ್ಲಿಗೆ ಬಂದಿದ್ದ ನೆನಪುಗಳನ್ನು ಹಿರಿಯರು ಮೆಲುಕು ಹಾಕುತ್ತಿದ್ದಾರೆ.
ಹೈಲೈಟ್ಸ್:
ಇಂದಿರಾ ಗಾಂಧಿ ಭಾರತೀಯ ಪ್ರಧಾನಿಯಾಗುವುದಕ್ಕೂ ಮುನ್ನ ಬಜಪೆಯ ಆ ಜಾಗದಲ್ಲಿ ‘ಇಂದಿರಾ ಕ್ಯಾಂಟೀನ್’ ಉದ್ಘಾಟನೆಗೆ ಆಡಳಿತಾತ್ಮಕ ವಿಘ್ನ ಉಂಟಾಗಿದೆ.
ಜೂ.4ರಂದು ಜಿಲ್ಲೆಯ ಉಸ್ತುವಾರಿ ಸಚಿವರು ಇಂದಿರಾ ಕ್ಯಾಂಟೀನ್ ಉದ್ಘಾಟಿಸಲು ಯೋಜನೆ ಮಾಡಿದ್ದರು ಆದರೆ ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ರದ್ದುಗೊಂಡಿದೆ.
ಇಂದಿರಾ ಗಾಂಧಿ 1955ರಲ್ಲಿ ‘ಬಾನುಲಿ ಕೇಂದ್ರ’ ರೇಡಿಯೋ ಹೌಸ್ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಬಾಲ್ಯದ ತುಂಟಾಟದಲ್ಲಿ ಗಾಯಗೊಂಡಿದ್ದರು ಎಂದು ಹಿರಿಯರು ನೆನಪಿಸುತ್ತಾರೆ.
ಬಜಪೆ: ಇಂದಿರಾ ಗಾಂಧಿ ಭಾರತದ ಪ್ರಧಾನಿಯಾಗುವುದಕ್ಕೂ ಮುನ್ನ ಓಡಾಡಿ ಆಟವಾಡಿದ್ದ ಬಜಪೆಯ ಆ ಜಾಗದಲ್ಲಿಅವರದೇ ಹೆಸರಿನ ಮತ್ತು ಅವರದೇ ಭಾವಚಿತ್ರವುಳ್ಳ ‘ಇಂದಿರಾ ಕ್ಯಾಂಟೀನ್’ ಉದ್ಘಾಟನೆಗೆ ಆಡಳಿತಾತ್ಮಕ ವಿಘ್ನ ಕಂಡುಬಂದಿದೆ.
ಜೂ.4ರಂದು ಮಧ್ಯಾಹ್ನ 11.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬಜಪೆಯ ಇಂದಿರಾ ಕ್ಯಾಂಟೀನ್ ಉದ್ಘಾಟಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಬಜಪೆಯ ಕಾರ್ಯಕ್ರಮ ಹೊರತುಪಡಿಸಿ ಬುಧವಾರ ಬೆಳಗ್ಗಿನಿಂದ ಸಂಜೆವರೆಗೂ ಮೂಲ್ಕಿ, ಮೂಡುಬಿದಿರೆ ಕ್ಷೇತ್ರದಲ್ಲಿನಿಗದಿಯಾಗಿದ್ದು ಉಸ್ತುವಾರಿ ಸಚಿವರ ಎಲ್ಲಾ ಕಾರ್ಯಕ್ರಮಗಳು ಯಥಾಪ್ರಕಾರ ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.
70 ವರ್ಷಗಳ ಹಿಂದೆ ಇಂದಿರಾ ಆಗಮಿಸಿದ್ದರು
1955ರಲ್ಲಿ‘ಬಾನುಲಿ ಕೇಂದ್ರ’ ರೇಡಿಯೋ ಹೌಸ್ ಉದ್ಘಾಟನೆಗೆ ಭಾರತದ ಮೊದಲ ಪ್ರಧಾನಿ ಜವಾಹರಲಾಲ… ನೆಹರೂ ಜತೆ ಅವರ ಮಗಳು ಇಂದಿರಾ ಪ್ರಧಾನಿಯಾಗುವುದಕ್ಕೂ ಮುನ್ನ ಆಗಮಿಸಿದ್ದ ವೇಳೆ ಬಾಲ್ಯದ ತುಂಟಾಟದಂತೆ ಜಾರುಬಂಡಿಯಲ್ಲಿ ಆಟವಾಡಿ ಜಾರಿಬಿದ್ದು ಮೈಕೈಗೆ ತರಚುಗಾಯ ಮಾಡಿಕೊಂಡಿದ್ದರು ಎಂಬುದನ್ನು ಆಗಿನ ಹಿರಿಯರು ನೆನಪಿಸುತ್ತಿದ್ದರು.
ಸಿದ್ಧಗೊಂಡಿದೆ ಇಂದಿರಾ ಕ್ಯಾಂಟೀನ್
ಉಸ್ತುವಾರಿ ಸಚಿವರ ’ಟೈಮ್…’ಗಾಗಿ ಕಾದು ಕೊನೆಗೂ ಜೂ.4ಕ್ಕೆ ಕಾರ್ಯಕ್ರಮ ಫಿಕ್ಸ್ ಆಗಿತ್ತು. ಕ್ಯಾಂಟೀನ್ ಕಾಮಗಾರಿಯೂ ಫಿನಿಶ್ ಆಗಿತ್ತು. ಆಮಂತ್ರಣ ಪತ್ರಿಕೆಯೂ ಆಗಿತ್ತು. ಚಪ್ಪರ ಅಲಂಕಾರ ಸಹಿತ ಎಲ್ಲಪೂರ್ವತಯಾರಿಯೂ ನಡೆದಿತ್ತು. ಆದರೆ ಕೊನೆಯ ಕ್ಷಣದಲ್ಲಿಕಾರ್ಯಕ್ರಮ ರದ್ದುಗೊಂಡಿದೆ. ಉದ್ಘಾಟನೆಯ ಮುಂದಿನ ದಿನಾಂಕ ಪ್ರಕಟಿಸಲಾಗಿಲ್ಲ.
ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ಗಳಲ್ಲಿ ಉತ್ತಮ ನಿರ್ವಹಣೆ
2018 ರಲ್ಲಿ ಬಡ ಜನರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಅಂದಿನ ಕಾಂಗ್ರೆಸ್ ಸರ್ಕಾರ ಆರಂಭಿಸಿತ್ತು. ಆರಂಭದಲ್ಲಿ ಮೆನು ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಗ್ರಾಹಕರ ಕೊರತೆ ಕಂಡುಬಂದಿತ್ತು. ಆದರೀಗ, ಮತ್ತೆ ಕಾಂಗ್ರೆಸ್ ಸರ್ಕಾರ ಬಂದಿದ್ದು, ಮೆನು ಎಲ್ಲವೂ ಬದಲಾಗಿದೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ಗಳು ಚೆನ್ನಾಗಿ ನಡೆಯುತ್ತಿವೆ.
ಇಂದಿರಾ ಕ್ಯಾಂಟೀನ್ ಮೆನುವಿನಲ್ಲಿ ಏನಿದೆ?
ಇಂದಿರಾ ಕ್ಯಾಂಟೀನ್ಗಳಿಗೆ ಮರುಜೀವ ನೀಡಲು ರಾಜ್ಯ ಸರ್ಕಾರ ಕಳೆದ ವರ್ಷವೇ ಮುಂದಾಗಿದೆ. ಆ ಹಿನ್ನೆಲೆಯಲ್ಲಿ ನಾಲ್ಕು ಹೊಸ ಮೆನುಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ, ಈ ಪೈಕಿ ಒಂದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಉಳಿದವು ಶೀಘ್ರ ಜಾರಿಯಾಗಿದ್ದವು. ಕ್ಯಾಂಟೀನ್ ಗಳಿಗೆ ಮೆನು ಪೂರೈಕೆ ಟೆಂಡರ್ ಅನ್ನು ಹೊಸದಿಲ್ಲಿ ಮೂಲದ ರಿವಾರ್ಡ್ಸ್ ಸಂಸ್ಥೆಗೆ ನೀಡಲಾಗಿದೆ. ಹೊಸ ಮೆನುವಿನಲ್ಲಿ ಏನೆಲ್ಲಾ ಇದೆ? ಇಲ್ಲಿದೆ ವಿವರ.
ಟೆಂಡರ್ ಪೂರೈಕೆದಾರರಿಗೆ, ಅಡುಗೆ ತಯಾರಕರಿಗೆ ಷರತ್ತು
ಇಂದಿರಾ ಕ್ಯಾಂಟೀನ್ಗಳ ಮೆನು ಬದಲಾವಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಇಂದಿರಾ ಕ್ಯಾಂಟೀನ್ ಗಳಿಗೆ ಆಹಾರ ಪೂರೈಕೆಗೆ ಸಂಬಂಧಿಸಿದಂತೆ ಸದ್ಯ ಹೊಸ ಗುತ್ತಿಗೆದಾರರಿಗೆ ಟೆಂಡರ್ ಕರೆದಿದೆ. ಯಾವೆಲ್ಲಾ ತಿಂಡಿ, ಊಟ ಸಿದ್ಧಪಡೆದಬೇಕು ಎಂದು ಅವರಿಗೆ ಹೇಳಿದೆ. ಒಂಭತ್ತು ರೀತಿಯ ತಿಂಡಿ, ಮುದ್ದೆ, ಚಪಾತಿ ಊಟ ಹೊಸ ಮೆನುವಿನಲ್ಲಿದೆ. ಇದರ ಜತೆಗೆ ಅಡುಗೆ ತಯಾರಕರಿಗೆ ಹಲವು ಷರತ್ತುಗಳನ್ನು ಸಹ ವಿಧಿಸಲಾಗಿದೆ.