ಹೆಚ್ಚಾಗುತ್ತಿದೆ ಥೈಲ್ಯಾಂಡ್ ಕಾಂಬೋಡಿಯಾ ನಡುವಿನ ಗುಂಡಿನ ಚಕಮಕಿ

ಹೆಚ್ಚಾಗುತ್ತಿದೆ ಥೈಲ್ಯಾಂಡ್ ಕಾಂಬೋಡಿಯಾ ನಡುವಿನ ಗುಂಡಿನ ಚಕಮಕಿ

Kannada Nadu
ಹೆಚ್ಚಾಗುತ್ತಿದೆ ಥೈಲ್ಯಾಂಡ್ ಕಾಂಬೋಡಿಯಾ  ನಡುವಿನ  ಗುಂಡಿನ ಚಕಮಕಿ

ಹೆಚ್ಚಾಗುತ್ತಿದೆ ಥೈಲ್ಯಾಂಡ್ ಕಾಂಬೋಡಿಯಾ ನಡುವಿನ ಗುಂಡಿನ ಚಕಮಕಿ

ಥೈಲ್ಯಾಂಡ್‌ ಹಾಗೂ ಕಾಂಬೋಡಿಯಾ ನಡುವೆ ಗುಂಡಿನ ಚಕಮಕಿ ಏರ್ಪಟ್ಟಿದೆ. ಗುರುವಾರ ಮುಂಜಾನೆ ಥೈಲ್ಯಾಂಡ್‌ನ ಸುರಿನ್ ಪ್ರಾಂತ್ಯದ ಪ್ರಸಾತ್ ತಾ ಮುಯೆನ್ ಥಾಮ್‌ನ ಪ್ರಾಚೀನ ದೇವಾಲಯ ಸ್ಥಳದ ಬಳಿಯಲ್ಲಿ ಗುಂಡಿನ ಚಕಮಕಿ ನಡೆದಿದೆ. ಬುಧವಾರದ ಘರ್ಷಣೆಯನ್ನು ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಎರಡೂ ದೃಢಪಡಿಸಿವೆ ಮತ್ತು ಅದು ಗಡಿಯಲ್ಲಿರುವ ದೇವಾಲಯಗಳ ಬಳಿ ನಡೆದಿದೆ ಎಂದು ಹೇಳಿವೆ.

ಬ್ಯಾಂಕಾಕ್‌: ಥೈಲ್ಯಾಂಡ್‌ ಹಾಗೂ ಕಾಂಬೋಡಿಯಾ ನಡುವೆ ಗುಂಡಿನ ಚಕಮಕಿ ಏರ್ಪಟ್ಟಿದೆ. ಗುರುವಾರ ಮುಂಜಾನೆ ಥೈಲ್ಯಾಂಡ್‌ನ ಸುರಿನ್ (Gun Fight) ಪ್ರಾಂತ್ಯದ ಪ್ರಸಾತ್ ತಾ ಮುಯೆನ್ ಥಾಮ್‌ನ ಪ್ರಾಚೀನ ದೇವಾಲಯ ಸ್ಥಳದ ಬಳಿಯಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಪ್ರಸಾತ್ ತಾ ಮುಯೆನ್ ಥಾಮ್ ಬಳಿ ಹೊಸ ಗಡಿ ಘರ್ಷಣೆ ಸಂಭವಿಸಿದ ನಂತರ ನೆರೆಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಯಿತು. ಪ್ರಸಾತ್ ತಾ ಮುಯೆನ್ ಥಾಮ್ ಎಂಬುದು ಥೈಲ್ಯಾಂಡ್‌ನ ಈಶಾನ್ಯ ಸುರಿನ್ ಪ್ರಾಂತ್ಯದಲ್ಲಿರುವ ಒಂದು ದೇವಾಲಯವಾಗಿದ್ದು, ಅದರ ಮೇಲೆ ಕಾಂಬೋಡಿಯಾ ಹಕ್ಕು ಸಾಧಿಸಿದೆ. ಈ ಉದ್ವಿಗ್ನತೆಯ ನಂತರ, ಥೈಲ್ಯಾಂಡ್ ಕಾಂಬೋಡಿಯಾದ ಗಡಿಯಲ್ಲಿ F-16 ಯುದ್ಧ ವಿಮಾನಗಳನ್ನು ನಿಯೋಜಿಸಿದೆ.

ಬುಧವಾರದ ಘರ್ಷಣೆಯನ್ನು ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಎರಡೂ ದೃಢಪಡಿಸಿವೆ ಮತ್ತು ಅದು ಗಡಿಯಲ್ಲಿರುವ ದೇವಾಲಯಗಳ ಬಳಿ ನಡೆದಿದೆ ಎಂದು ಹೇಳಿವೆ. “ರಾಷ್ಟ್ರದ ಸಾರ್ವಭೌಮ ಪ್ರದೇಶವನ್ನು ರಕ್ಷಿಸಲು ನಿಯೋಜಿಸಲಾದ ಕಾಂಬೋಡಿಯನ್ ಪಡೆಗಳ ಮೇಲೆ ಸಶಸ್ತ್ರ ದಾಳಿ ನಡೆಸುವ ಮೂಲಕ ಥಾಯ್ ಸೇನೆಯು ಕಾಂಬೋಡಿಯಾ ಸಾಮ್ರಾಜ್ಯದ ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸಿದೆ” ಎಂದು ರಕ್ಷಣಾ ಸಚಿವಾಲಯದ ವಕ್ತಾರೆ ಮಾಲಿ ಸೊಚೆಟಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಏತನ್ಮಧ್ಯೆ, ಕಾಂಬೋಡಿಯನ್ ಪಡೆಗಳು ಪ್ರಸಾತ್ ತಾ ಮುಯೆನ್ ಥಾಮ್ ದೇವಾಲಯದ ಪೂರ್ವ ಭಾಗದ ಕಡೆಗೆ ಗುಂಡು ಹಾರಿಸಿದ ನಂತರ ಘರ್ಷಣೆ ಭುಗಿಲೆದ್ದಿತು ಎಂದು ಥಾಯ್ ಸೇನೆ ಹೇಳಿಕೊಂಡಿದೆ.

ಭೂ ಗಣಿ ಸ್ಫೋಟದಲ್ಲಿ ಥಾಯ್ ಸೈನಿಕನೊಬ್ಬ ಕಾಲು ಕಳೆದುಕೊಂಡ ನಂತರ ಪ್ರತಿಭಟನೆಯಾಗಿ ಥೈಲ್ಯಾಂಡ್ ಕಾಂಬೋಡಿಯಾದಿಂದ ತನ್ನ ರಾಯಭಾರಿಯನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಅಷ್ಟೇ ಅಲ್ಲದೆ, ಕಾಂಬೋಡಿಯಾದ ರಾಯಭಾರಿಯನ್ನು ಸಹ ಹೊರಹಾಕಿತು. ಥೈಲ್ಯಾಂಡ್‌ನ ಹೇಳಿಕೆಗಳನ್ನು “ಆಧಾರರಹಿತ ಆರೋಪಗಳು” ಎಂದು ಕಾಂಬೋಡಿಯಾ ತಳ್ಳಿಹಾಕಿದೆ ಮತ್ತು ಪ್ರತಿಯಾಗಿ, ಎಲ್ಲಾ ಥಾಯ್ ರಾಜತಾಂತ್ರಿಕ ಸಿಬ್ಬಂದಿ ದೇಶವನ್ನು ತೊರೆಯುವಂತೆ ಕರೆ ನೀಡಿದೆ. ಭೂ ಗಣಿ ಸ್ಫೋಟಕ್ಕೆ ಪ್ರತಿಕ್ರಿಯೆಯಾಗಿ ಥೈಲ್ಯಾಂಡ್ ಬುಧವಾರ ಈಶಾನ್ಯ ಭಾಗದಿಂದ ಕಾಂಬೋಡಿಯಾದೊಂದಿಗಿನ ತನ್ನ ಗಡಿ ದಾಟುವಿಕೆಯನ್ನು ಮುಚ್ಚಿದೆ.

ಥಾಯ್ ನಾಗರಿಕರು ದೇಶ ಬಿಡಲು ಮನವಿ

ಕಾಂಬೋಡಿಯಾದಲ್ಲಿರುವ ಥಾಯ್ ರಾಯಭಾರ ಕಚೇರಿಯು ದೇಶದಲ್ಲಿರುವ ಎಲ್ಲಾ ಥಾಯ್ ಪ್ರಜೆಗಳು ಸಾಧ್ಯವಾದಷ್ಟು ಬೇಗ ಹೊರಹೋಗುವಂತೆ ಕರೆ ನೀಡಿದೆ. ಎರಡು ನೆರೆಹೊರೆಯ ರಾಷ್ಟ್ರಗಳ ನಡುವಿನ ಗಡಿಯಲ್ಲಿ ಕಾಂಬೋಡಿಯನ್ ಮಿಲಿಟರಿಯ ವಿರುದ್ಧ ಕ್ರಮ ಕೈಗೊಳ್ಳಲು ಥಾಯ್ ಸೇನೆಯು ಎಫ್ -16 ಫೈಟರ್ ಜೆಟ್ ಅನ್ನು ನಿಯೋಜಿಸಿರುವುದಾಗಿ ದೃಢಪಡಿಸಿದೆ. ಗುರುವಾರ ಕಾಂಬೋಡಿಯನ್ ಮಿಲಿಟರಿಯೊಂದಿಗೆ ನಡೆದ ಗಡಿ ಘರ್ಷಣೆಯ ನಂತರ ಕನಿಷ್ಠ ಮೂವರು ಥಾಯ್ ನಾಗರಿಕರು ಗಾಯಗೊಂಡಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";