ಬೆಂಗಳೂರು : ಶ್ರೀ. ಸಿ.ಎಂ ಲಿಂಗೇಶ್, ಚಾಲಕ ಬಿಲ್ಲೆ ಸಂಖ್ಯೆ 533 ಮತ್ತು ಶ್ರೀ. ಹೆಚ್.ಕೆ.ರಾಜು ಚಾಲಕ ಕಂ ನಿರ್ವಾಹಕ ಬಿಲ್ಲೆ ಸಂಖ್ಯೆ 4826 ಘಟಕ-2 ಬೆಂಗಳೂರು ಕೇಂದ್ರೀಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ: 09.12.2021ರಂದು ವಾಹನ ಸಂಖ್ಯೆ ಕೆ.ಎ57-ಎಫ್2885 ಅನುಸೂಚಿ ಸಂಖ್ಯೆ-111/112, ಬೆಂಗಳೂರು-ಕುಂದಾಪುರ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಪ್ರಯಾಣಿಸುತ್ತಿದ ಪ್ರಯಾಣಿಕರು ರೂ.2ಲಕ್ಷ ಬೆಲೆಬಾಳುವ ಮೊಬೈಲ್, ನಗದು ಮತ್ತು ಚಿನ್ನಾಭರಣವನ್ನೊಳಗೊಂಡ ಒಂದು ಬ್ಯಾಗ್ನ್ನು ಬಸ್ಸಿನಲ್ಲಿ ಬಿಟ್ಟು ಉಡುಪಿ ಬಸ್ ನಿಲ್ದಾಣ ಇಳಿದಿರುತ್ತಾರೆ.
ತದನಂತರ ಕುಂದಾಪುರ ಘಟಕದಲ್ಲಿ, ಚಾಲಕ ಮತ್ತು ನಿರ್ವಾಹಕರು ಬಸ್ಸಿನಲ್ಲಿರುವ ಬ್ಯಾಗ್ನ್ನು ಗಮನಿಸಿ, ಸದರಿ ಪ್ರಯಾಣಿಕರಿಗೆ ದೂರವಾಣಿ ಮೂಲಕ ಕರೆಮಾಡಿ ವಿಷಯ ತಿಳಿಸಿ, ಕುಂದಾಪುರ ಘಟಕ ವ್ಯವಸ್ಥಾಪಕರ ಸಮ್ಮುಖದಲ್ಲಿ ಸದರಿ ಪ್ರಯಾಣಿಕರಿಗೆ ತಲುಪಿಸಿರುವುದನ್ನು ಪ್ರಶಂಸಿಸಿ, ಶ್ರೀ.ಶಿವಯೋಗಿ ಸಿ.ಕಳಸದ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು , ಕೆ ಎಸ್ ಆರ್ ಟಿ ಸಿ ರವರು ಸದರಿ ಚಾಲಕ ನಿರ್ವಾಹಕರ ಕಾರ್ಯವನ್ನು ಶ್ಲಾಘಿಸಿರುತ್ತಾರೆ.