ಬೆಂಗಳೂರು : J J ನಗರ, ಪೊಲೀಸ್ ಠಾಣೆ ವ್ಯಾಪ್ತಯಲ್ಲಿ ನಿನ್ನೆ ನಡೆದ ಚೂರಿ ಇರಿತಕ್ಕೆ ಒಳಗಾಗಿ ಒಬ್ಬ ಯುವಕ ಮೃತ ಪಟ್ಟ ಘಟನೆ, ಅತ್ಯಂತ ಅಮಾನುವಿಯವಾಗಿದೆ. ದ್ವಿಚಕ್ರ ವಾಹನದಲ್ಲಿ ಹೋಗಿದ್ದ ಯುವಕರು, ಸಣ್ಣ ಅಪಘಾತ ಸಂಬಂಧ ಮಾತಿಗೆ ಮಾತು ಬೆಳೆದು, ಘರ್ಷಣೆ ನಡೆದ ವಿಷಯದಲ್ಲಿ ಒಬ್ಬ ಯುವಕ, ತೊಡೆ ಮೇಲಿನ ಚೂರಿ ಇರಿತದಿಂದ, ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಈ ಸಂಬಂಧ ಪೊಲೀಸರು ಮೂವರು, ಯುವಕರನ್ನು ವಶ ಪಡೆದಿದ್ದಾರೆ, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.