ದೇವನಹಳ್ಳಿ : ಪಟ್ಟಣದ ಕೆಲ ವಾರ್ಡುಗಳಲ್ಲಿ ಸಮರ್ಪಕವಾಗಿ ನೀರು ಸರಬಾಜು ಮಾಡುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿದ್ದು ನಿಗದಿತ ಸಮಯಕ್ಕೆ ಸರಿಯಾಗಿ ಎಲ್ಲಾ ವಾರ್ಡುಗಳಿಗೆ ನೀರು ಸರಬರಾಜು ಮಾಡುವಂತೆ ವಾಟರ್ ಮ್ಯಾನ್ಗಳಿಗೆ ಪುರಸಭೆ ಸ್ಥಯಿಸಮಿತಿ ಅಧ್ಯಕ್ಷ ನಾಗೇಶ್ ತಿಳಿಸಿದರು
ದೇವನಹಳ್ಳಿ ಪಟ್ಟಣದ ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷರ ಕಚೇರಿಯಲ್ಲಿ ಕರೆಯಲಾಗಿದ್ದ ವಾಟರ್ ಮ್ಯಾನ್ಗಳ ಸಭೆಯಲ್ಲಿ ಅವರು ಮಾತನಾಡಿದರು.
ಕೆಲ ವಾರ್ಡುಗಳ ಸಾರ್ವಜನಿಕರು ಮೊಟಾರ್ ದುರಸ್ತಿಯಾಗಿದೆ, ಇನ್ನಿತರೆ ಕಾರಣಗಳೇಳಿ ವಾಟರ್ಮ್ಯಾನ್ಗಳು 15-20 ದಿನಗಳಾದರು ನೀರು ಸರಬರಾಜಾಗು ಮಾಡುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಮೋಟಾರ್ ದುರಸ್ತಿಯಾಗಿದ್ದರೆ ಅಥವ ಪೈಪ್ಲೈನ್ ದುರಸ್ತಿಯಾಗಿದ್ದರೆ ತಕ್ಷಣ ದುರಸ್ತಿಮಾಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲಾ ವಾರ್ಡುಗಳಿಗೆ ಸಮರ್ಪಕವಾಗಿ ನೀರು ಸರಬರಾಜುಮಾಡುವಂತೆ ಸೂಚಿಸಿದರು.
ಇದೆ ವೇಳೆ ಪುರಸಭೆ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ವಾಟರ್ಮ್ಯಾನ್ಗಳು ಹಾಗು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.