ಮೇ ರಂದು 20 ಹೊಸಪೇಟೆಯ ಸಾಧನಾ ಸಮಾವೇಶದ ಸಿದ್ಧತೆಯನ್ನು ಡಿಸಿಎಂ ಪರಿಶೀಲನೆ

Kannada Nadu
ಮೇ ರಂದು 20 ಹೊಸಪೇಟೆಯ ಸಾಧನಾ ಸಮಾವೇಶದ ಸಿದ್ಧತೆಯನ್ನು ಡಿಸಿಎಂ ಪರಿಶೀಲನೆ

ವಿಜಯನಗರ: ಶಾಸಕ ಕೊತ್ತೂರು ಮಂಜುನಾಥ ಏನು ಮಾತಾಡಿದ್ದಾರೆ ಗೊತ್ತಿಲ್ಲ, ಅದರ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಏನೆಂದು ತಿಳಿದುಕೊಂಡು ಮಾತನಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಹೊಸಪೇಟೆಯಲ್ಲಿ ಮೇ.20 ರಂದು ನಡೆಯುವ ಸರಕಾರದ ಎರಡು ವರ್ಷದ ಸಾಧನೆ ಸಂಭ್ರಮದ ಪೂರ್ವ ಸಿದ್ದತೆ ಪರಿಶೀಲನೆ ನಡೆಸಿ ಸುದ್ದಿಗೋಷ್ಟೀಯಲ್ಲಿ ಮಾತನಾಡಿ 2023 ಮೇ 13ರಂದು ಒಂದು ದೊಡ್ಡ ಸಂದೇಶ ಕೊಟ್ಟಿದ್ರು. ಕಾಂಗ್ರೆಸ್ ಮೇಲೆ ವಿಶ್ವಾಸ ನಂಬಿಕೆ ಇಟ್ಟು 136 ಸೀಟ್ ಗೆಲ್ಲಿಸಿ ಅಧಿಕಾರಕ್ಕೆ ತಂದ್ರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ರೂ ಡಬಲ್ ಇಂಜಿನ್ ಸರ್ಕಾರಕ್ಕೆ ಅವಕಾಶ ಕೊಡದೇ ಕಾಂಗ್ರೆಸ್ ಗೆಲ್ಲಿಸಿದ್ರು, ಎರಡು ವರ್ಷದ ಸಂಭ್ರಮ, ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಅದಕ್ಕಾಗಿ ವಿಜಯನಗರ ಆಯ್ಕೆ ಮಾಡಿಕೊಂಡು, ಹೆಚ್ಚಿಗೆ ಶಕ್ತಿ ಕೊಡಲು ಇಲ್ಲಿಂದ ಕಾರ್ಯಕ್ರಮ ಆರಂಭ ಮಾಡಿದ್ದೇವೆ, ಈ ಸಂಭ್ರಮವನ್ನ ವಿಜಯನಗರದಿಂದ ಮಾಡಲು ತೀರ್ಮಾನ ಮಾಡಿದ್ದೇವೆ. ಅದಕ್ಕಾಗಿ 20ರಂದು ಕಾರ್ಯಕ್ರಮ ಮಾಡುತ್ತಿದ್ದೇವೆ. ತಾಂಡಾ, ಹಟ್ಟಿ, ದೊಡ್ಡಿಗಳು ಸೇರಿದಂತೆ ಕೆಲವರಿಗೆ ಪಟ್ಟ ಸಿಕ್ಕಿಲ್ಲ. ಬಿಜೆಪಿ ಸರ್ಕಾರ ಎಲ್ಲರಿಗು ಕೊಡಲು ವಿಫಲವಾಗಿತ್ತು. ಹೀಗಾಗಿ ಒಂದು ಲಕ್ಷ ಪಟ್ಟ ಕೊಡಲು ಸಿದ್ದತೆ ಮಾಡಿಕೊಂಡಿದ್ದೇವೆ. 50 ಸಾವಿರ ಫಲಾನುಭವಿಗಳನ್ನ ಕರೆಸ್ತಿದ್ದೇವೆ. ಉಳಿದಂತೆ ನಮ್ಮ ಕಾರ್ಯಕರ್ತರು ಬರಲಿದ್ದಾರೆ. ಸಿಎಂ ಕೂಡಾ ಇಂದು ಬಂದು ವೀಕ್ಷಣೆ ಮಾಡಲಿದ್ದಾರೆ ಎಂದರು.

ಪಕ್ಷ ಹಾಗೂ ಸರ್ಕಾರ ಒಟ್ಟಿಗೆ ಸೇರಿ ಕಾರ್ಯಕ್ರಮ ಮಾಡುತ್ತಿದ್ದೇವೆ ಇಲ್ಲಿಂದ ಇಡೀ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಸಂದೇಶ ಕೊಡುತ್ತೇವೆ, ಒಂದು ಲಕ್ಷ ಜನರಿಗೆ ಪಟ್ಟಾ ಕೊಡೋದು ತೀರ್ಮಾನ ಮಾಡಿದ್ದೇವೆ. ನವಿಲೆ ಡ್ಯಾಂ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವನೆ ಮಾಡಿದ್ದೇವೆ. ಈಗಾಗಲೇ ನಮ್ಮ ಟೆಕ್ನಿಕಲ್ ಟೀಂ ಒಂದು ಪ್ರಸ್ತಾವನೆ ಕೊಟ್ಟಿದ್ದಾರೆ. ಆಂದ್ರ, ತೆಲಂಗಾಣ ಸಿಎಂಗೆ ಈಗಾಗಲೇ ನಾನು ಮಾತಾಡಿದ್ದೇನೆ. ಹೂಳು ಎತ್ತಲು ಪ್ರೋತ್ಸಹ ಕೊಡುತ್ತಿಲ್ಲ. ಅದಕ್ಕಾಗಿ ನವಲಿ ಅಥವಾ ಇನ್ನೊಂದು ಮಾಡೋದಕ್ಕೆ ಪ್ಲಾನ್ ಮಾಡ್ತಿದ್ದೇವೆ ಎಂದ ಡಿಕೆಶಿ ಹೇಳಿದರು. ಗ್ರೆಟರ್ ಬೆಂಗಳೂರು ಅಥಾರಟಿ ಮಾಡಿದ್ದೇವೆ. ಬೆಂಗಳೂರು ಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";