ಕ್ರಿಕೆಟ್‌ ದಿಗ್ಗಜ ಈಗ ಅರಣ್ಯ ಇಲಾಖೆ ರಾಯಭಾರಿ : ಕನ್ನಡಿಗ

ಅನಿಲ್ ಕುಂಬ್ಳೆ ಈಗ  ಅರಣ್ಯ ಇಲಾಖೆ ರಾಯಭಾರಿ!

Kannada Nadu
ಕ್ರಿಕೆಟ್‌ ದಿಗ್ಗಜ ಈಗ ಅರಣ್ಯ ಇಲಾಖೆ ರಾಯಭಾರಿ : ಕನ್ನಡಿಗ
ಅನಿಲ್ ಕುಂಬ್ಳೆ ಈಗ  ಅರಣ್ಯ ಇಲಾಖೆ ರಾಯಭಾರಿ!
ಕ್ರಿಕೆಟ್‌ ದಿಗ್ಗಜ ಈಗ ಅರಣ್ಯ ಇಲಾಖೆ ರಾಯಭಾರಿ
ಬೆಂಗಳೂರು: ನಮ್ಮ ರಾಜ್ಯಕ್ಕೆ ನನ್ನ ಕೈಯಲ್ಲಿ ಎಷ್ಟು ಸೇವೆ ಮಾಡಲು ಸಾಧ್ಯವೋ ಅಷ್ಟು ಸೇವೆ ಮಾಡೋದಾಗಿ ಕ್ರಿಕೆಟಿಗ ಕನ್ನಡಿಗ ಅನಿಲ್ ಕುಂಬ್ಳೆ (Anil Kumbl) ತಿಳಿಸಿದ್ದಾರೆ.
ಅರಣ್ಯ ಇಲಾಖೆ ರಾಯಭಾರಿಯಾಗಿ (Forest Department Brand Ambassador) ನೇಮಕವಾದ ಹಿನ್ನಲೆಯಲ್ಲಿ ಇಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನ ಭೇಟಿಯಾಗಿ ಕುಂಬ್ಳೆ ಮಾತುಕತೆ ‌ನಡೆಸಿದರು. ಇದನ್ನೂ ಓದಿ: ನೋಂದಣಿ ಮಾಡಿರುವ ರೈತರ ಜೋಳ ಖರೀದಿಸಲು ರೈತರ ನಿಯೋಗದಿಂದ ಆಹಾರ ಸಚಿವರಿಗೆ ಮನವಿ
ಈ ವೇಳೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ (Eshwar Khandre), ಅನಿಲ್ ಕುಂಬ್ಳೆ ಇಡೀ ದೇಶದ ಹೆಮ್ಮೆಯ ಆಟಗಾರ. ಅವರ ಸಾಧನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ದೇಶದಲ್ಲಿ ಅಮೋಘ ಸೇವೆ ಇದೆ, ಅವರಿಗೆ ಅರಣ್ಯಪ್ರಕೃತಿ ಬಗ್ಗೆ ಕಾಳಜಿ ಇದೆ. ಹಿಂದೆ ವನ್ಯಜೀವಿ ಬೋರ್ಡ್ ಉಪಾಧ್ಯಕ್ಷರಾಗಿದ್ರು. ಈಗ‌ ಯಾವುದೇ ಸಂಭಾವನೆ ಪಡೆಯದೇ ಅರಣ್ಯ ಇಲಾಖೆ ರಾಯಭಾರಿ ಆಗೋಕೆ ಒಪ್ಪಿದ್ದಾರೆ. ಅವರಿಗೆ ಧನ್ಯವಾದ ಹೇಳ್ತೀನಿ. ಸಿಎಂ,‌ ಡಿಸಿಎಂ ಉಪಸ್ಥಿತಿಯಲ್ಲಿ MOU ಮಾಡಿಕೊಳ್ಳಲಾಗುತ್ತದೆ. ಕುಂಬ್ಳೆ ಅವರು ರಾಯಭಾರಿ ಆಗಿರೋದ್ರೀಂದ ವನ್ಯಜೀವಿ ಸಂರಕ್ಷಣೆ, ಅರಣ್ಯ ಸಂರಕ್ಷಣೆ ಅವರಿಂದ ಆಗಲಿದೆ ಅಂತ ನಾನು ಭಾವಿಸುತ್ತೇನೆ ಅಂತ ತಿಳಿಸಿದರು.
ಅನಿಲ್ ಕುಂಬ್ಳೆ ಮಾತಾಡಿ, ಕರ್ನಾಟಕ ಸರ್ಕಾರ ನನಗೆ ಇದೊಂದು ಜವಾಬ್ದಾರಿ ಕೊಟ್ಟಿದೆ. ಹಿಂದೆಯೂ ನಾನು ಉಪಾಧ್ಯಕ್ಷ ಆಗಿದ್ದೆ. ಮತ್ತೊಮ್ಮೆ ಅವಕಾಶ ಸಿಕ್ಕಿದ್ದಕ್ಕೆ, ಜವಾಬ್ದಾರಿ ಕೊಟ್ಟಿದ್ದಕ್ಕೆ ಸಂತೋಷ ಆಗುತ್ತದೆ. ನಮ್ಮ ರಾಜ್ಯಕ್ಕೆ ಏನು ಸೇವೆ ಆಗುತ್ತೋ ಅದನ್ನ ಸಲ್ಲಿಸುತ್ತೇನೆ. ಎಲ್ಲರಿಗೂ ವನ್ಯಜೀವಿಗಳ ಬಗ್ಗೆ ಕಾಳಜಿ ಬರಲಿ. ವನ್ಯಜೀವಿಗಳ ಬಗ್ಗೆ ಮಕ್ಕಳು ಸೇರಿ ಎಲ್ಲರಿಗೂ ಕಾಳಜಿ ಬರಲಿ ಅಂತ ಕರೆ ನೀಡಿದ್ರು. ಇದನ್ನೂ ಓದಿ: IPL Final | ಸಂಭ್ರಮಾಚರಣೆ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಟ್ರೆ ಕ್ರಮ – ಬಿ.ದಯಾನಂದ್

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";