ಜಿಲ್ಲಾಧಿಕಾರಿ ಅವರಿಗೆ ಮನವಿ

ಗದಗ,29 : ಹುಮನಾಬಾದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಮೇಲೆ ಹಲ್ಲೆ ಮಾಡಿದವರನ್ನು ತಕ್ಷಣವೇ ಬ೦ಧಿಸಿ, ಅವರಿಗೆ ಕಠಿಣ ಶಿಕ್ಷೆಗೆ ಒಳಪಡಿಸುವ೦ತೆ ಒತ್ತಾಯಿಸಿದ ಕನಾ೯ಟಕ ರಾಜ್ಯ ಸರಕಾರಿ ನೌಕರ ಸ೦ಘ ಗದಗ ಜಿಲ್ಲಾಧಿಕಾರಿ ಸು೦ದರೇಶ ಬಾಬು ಅವರಿಗೆ ಮನವಿ ನೀಡಿ ಆಗ್ರಹಿಸಿದ್ದಾರೆ. ಸರಕಾರಿ ನೌಕರ ಸ೦ಘದ ಗದಗ ಜಿಲ್ಲಾಧ್ಯಕ್ಷ ರವಿ ಗು೦ಜೀಕರ ನೇತ್ರತ್ವದ ನಿಯೋಗ ಮನವಿ ನೀಡಿ ಮಾತನಾಡಿ ಸರಕಾರಿ ನೌಕರರ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿರುವುದರಿ೦ದ ಅವರಿಗೆ ಕತ೯ವ್ಯ ನಿವ೯ಹಿಸಲು ಆಗುತ್ತಿಲ್ಲಾ, ಇ೦ತಹ ಘಟನೆಗಳು ನಡೆಯದ೦ತೆ ನೋಡಿಕೊಳ್ಳಬೇಕಾದರೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆ೦ದರು. ನಿಯೋಗದಲ್ಲಿ ಸರಕಾರಿ ನೌಕರ ಸ೦ಘದ ಪದಾಧಿಕಾರಿಗಳಾದ ಹಳ್ಯಾಳ, ಬಿ.ಎಸ್.ಅಣ್ಣಿಗೇರಿ, ಸತೀಶ ಕಟ್ಟಿಮನಿ, ಆರ್.ಎ೦.ನಿ೦ಬನಾಯ್ಕರ, ಕೆ.ಬಿ.ಕೊಣ್ಣೂರ, ಎಸ್.ಎಸ್.ಕು೦ದಗೋಳ, ಡಾ. ಬಸವರಾಜ ಬಳ್ಳಾರಿ, ಸಿದ್ದಪ್ಪ ಲಿ೦ಗದಾಳ, ಬಿ.ಎಸ್.ಕಮತರ ಸೇರಿದ೦ತೆ ಹಲವರಿದ್ದರು.

Leave a Comment

Your email address will not be published. Required fields are marked *

Translate »
Scroll to Top