ಶಿಡ್ಲಘಟ್ಟದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ

ಶಿಡ್ಲಘಟ್ಟ : ತಾಲೂಕಿನ ಚೀಮನಹಳ್ಳಿ ಗ್ರಾಮದಲ್ಲಿ ಕಸ್ತೂರಿ ಕನ್ನಡ ಹವ್ಯಾಸಿ ಸಂಘ (ರಿ) ಹಾಗೂ ಪುನಿತ್ ರಾಜ್ ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ 66ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭುವನೇಶ್ವರಿ ತಾಯಿಗೆ ಪುಷ್ಪ ನಮನ ಸಲ್ಲಿಸಿ ಅಕಾಲಿಕ ಮರಣ ಹೊಂದಿದ ನಟ ಪುನೀತ್ ರಾಜ್ ಕುಮಾರ್ ಅವರ ಆತ್ಮಕ್ಕೆ ಶಾಂತಿ ಕೋರಿ ಹಾಲು ತುಪ್ಪ ಕಾರ್ಯದ ದಿನದಂದು ಅವರ ಹೆಸರಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಸ್ತೂರಿ ಕನ್ನಡ ಹವ್ಯಾಸಿ ಸಂಘದ ಸದಸ್ಯರಾದ ಸಿಕೆ ರಮೇಶ್ ಮಾತನಾಡಿ ಕನ್ನಡ ರಾಜ್ಯೋತ್ಸವ ಹಾಗೂ ದಿವಂಗತ ಪುನೀತ್ ರಾಜ್ ಕುಮಾರ್ ರವರ ಹಾಲು ತುಪ್ಪ ಕಾರ್ಯದಂದು ಅನ್ನಸಂತರ್ಪಣೆ ಮಾಡಿದೆವು. ನಾಡು ನುಡಿಗಾಗಿ ಪ್ರಾಣ ಬೇಕಾದ್ರೂ ಕೊಡ್ತೀವಿ ಆದ್ರೆ ಬೇರೆ ಭಾಷಿಕರಿಗೆ ಒಂದು ಇಂಚು ಜಾಗನೂ ಸಹ ಕೊಡುವುದಿಲ್ಲ ಎಂದು ನಾವು ಪಣ ತೊಟ್ಟೀದ್ದೀವಿ ಎಂದು ತಿಳಿಸಿದರು.ಇನ್ನು ಈ ಕಾರ್ಯಕ್ರಮವನ್ನು ಚೀಮನಹಳ್ಳಿ ಗ್ರಾಮಸ್ಥರೆಲ್ಲರೂ ಸೇರಿ ಬಹಳ ಅದ್ದೂರಿಯಾಗಿ ಕಾರ್ಯಕ್ರಮವನ್ನು ನೆರವೇರಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಬಳಗ ಹಾಗೂ ಗ್ರಾಮದ ಯುವಕರು,ಮುಖಂಡರು ಮತ್ತು ಗ್ರಾಮಸ್ಥರು  ಹಾಜರಿದ್ದರು.

Leave a Comment

Your email address will not be published. Required fields are marked *

Translate »
Scroll to Top