ಬೆಂಗಳೂರು,ಜನವರಿ,೨೪ : ಖ್ಯಾತ ಸಾಮಾಜಿಕ ಕಾರ್ಯಕರ್ತೆ ಅಕ್ಕಯ್ ಪದ್ಮಶಾಲಿ ಅವರ ಜೀವನಾಧರಿತ ನಾಟಕ “ಅಕ್ಕಯ್” ಮೊದಲ ಪ್ರದರ್ಶನದ ಉದ್ಘಾಟನೆಗೆ ಆಗಮಿಸುವಂತೆ ಕಾಜಾಣ ಹಾಗೂ ರಂಗಪಯಣ ತಂಡದ ಪ್ರತಿನಿಧಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿ, ಆಹ್ವಾನಿಸಿದರು. ರಂಗಭೂಮಿಯ ಪ್ರೊ. ಬೇಲೂರು ರಘುನಂದನ್, ನಯನಾ, ರಾಜಗುರು, ಜಿಪಿಒ ಚಂದ್ರು ಹಾಗೂ ಅಕ್ಕಯ್ ಪದ್ಮಶಾಲಿ ಮತ್ತಿತರರು ಇದ್ದರು.