ಧಾರವಾಡ: ನೇಹಾಳ ರ್ಬರ ಹತ್ಯೆಯನ್ನು ಸರ್ಥಿಸಿ ಆರೋಪಿಗಳು ಪೋಸ್ಟ್ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಏಪ್ರಿಲ್ ೧೮ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಓದುತ್ತಿದ್ದ ಕಾಂಗ್ರೆಸ್ ಕರ್ಪೊರೇಟರ್ ಪುತ್ರಿ ನಿರಂಜನ ಹಿರೇಮಠ ಅವರ ೨೪ ರ್ಷದ ಪುತ್ರಿ ನೇಹಾ ಹಿರೇಮಠಳನ್ನು ಕಾಲೇಜು ಕ್ಯಾಂಪಸ್ನಲ್ಲಿ ಫಯಾಜ್ ಎಂಬಾತ ಅನೇಕ ಬಾರಿ ಚಾಕುವಿನಿಂದ ಇರಿದು ರ್ಬರವಾಗಿ ಹತ್ಯೆ ಮಾಡಿದ್ದನು.
ಈ ಘಟನೆ ಕುರಿತಂತೆ ರಾಜ್ಯಾಂದ್ಯ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ರಾಜಕೀಯ ಬಣ್ಣ ಪಡೆದುಕೊಂಡಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಇದು ಲವ್ ಜಿಹಾದ್ ಪ್ರಕರಣ ಎಂದು ಬಿಜೆಪಿ ಆರೋಪಿಸಿದ್ದರೆ ಕಾಂಗ್ರೆಸ್ಸಿಗರು ಇದೊಂದು ವೈಯಕ್ತಿಕ ಘಟನೆ ಎಂದು ಹೇಳಿದ್ದರು. ಇನ್ನು ಆರೋಪಿ ಫಯಾಜ್ ನನ್ನು ಎನ್ ಕೌಂಟರ್ ಮಾಡಬೇಕು ಎಂಬ ಹೇಳಿಕೆಯೂ ಕೇಳಿಬಂದಿದೆ.
ಇದರ ಮಧ್ಯೆ ಕಿಡಿಗೇಡಿಗಳು ನೇಹಾ ಹತ್ಯೆಯನ್ನು ಸರ್ಥಿಸಿ ಪೋಸ್ಟ್ ಮಾಡಿದ್ದಾರೆ. ಸಾದಿಕ್ ತಡಕೋಡ ಮತ್ತು ಆದಿಲ್ ಎಂಬುವರು ಇನ್ ಸ್ಟಾಗ್ರಾಂನಲ್ಲಿ ನೇಹಾ, ಫಯಾಜ್ ಫೋಟೋ ಬಳಸಿ ಪೋಸ್ಟ್ ಮಾಡಿದ್ದಾರೆ. # NehaFayazTrueLove #JusticeforLove ಎಂದು ಈ ಇಬ್ಬರು ಕಿಡಿಗೇಡಿಗಳು ಪೋಸ್ಟ್ ಮಾಡಿದ್ದರು. ಇದರ ವಿರುದ್ಧ ಹಿಂದೂ ಸಂಘಟನೆ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೆ ಹಿಂದೂ ಯುವಕರು ನೇಹಾ ಹತ್ಯೆಯನ್ನು ಸರ್ಥಿಸಿ ಪೋಸ್ಟ್ ಮಾಡಿದ್ದ ಸಾದಿಕ್ ತಡಕೋಡ ಮತ್ತು ಆದಿಲ್ ಎಂಬುವರನ್ನು ಹಿಡಿದು ದಾವಣಗೆರೆಯ ವಿದ್ಯಾಗಿರಿ ಠಾಣೆಗೆ ಒಪ್ಪಿಸಿದ್ದಾರೆ.