ಶಿಕ್ಷಣ ನೀಡಿದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯಕ್ಕೆ ನಾನು ಚಿರರುಣಿ: DYSP ಹನಮಂತ ಭಜಂತ್ರಿ

ಇಲಕಲ: ಶಿಕ್ಷಣ ನೀಡಿದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯಕ್ಕೆ ನಾನು ಚಿರರುಣಿ: DYSP ಹನುಮಂತ ಭಜಂತ್ರಿ.

ಇಲಕಲ್ಲ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯಲ್ಲಿ ಉನ್ನತ ಶಿಕ್ಷಣ ಪಡೆದು ಇಂದು ಹೊಸಪೇಟೆ ಜಿಲ್ಲಾ ಅಬಕಾರಿ ಇಲಾಖೆಯ DYSP ಯಾಗಿ ಕಾರ್ಯ ನಿರ್ವಹಿಸುತ್ತಿರುವ ಹನುಮಂತ ಭಜಂತ್ರಿ ಅವರು ಸರಳ ಸತ್ಕಾರ ಸಮಾರಂಭದಲ್ಲಿ ಹೇಳಿದರು.

ಕಡುಬಡತನದ ಕುಟುಂಬದಿಂದ ಬಂದ ಕೊರಮ ಸಮಾಜದ ಹನುಮಂತ ಭಜಂತ್ರಿ ದೋಟಿಹಾಳ ಇವರು ಇಲಕಲ್ಲ ನಗರಕ್ಕೆ ಭೇಟಿ ನೀಡಿದಾಗ ಸಮಾಜದ ಅಧ್ಯಕ್ಷ ಬಸವರಾಜ ಹುನಕುಂಟಿ ಸಮಾಜದ ಹಿರಿಯರಾದ ಗಂಗಪ್ಪ ಮತ್ತು ಯಲ್ಲಪ್ಪ ಪೂಜಾರಿ ಮಹಾಂತೇಶ ಬಿಂಜವಾಡಗಿ ಮಲ್ಲೇಶ ಹುನಗುಂದ ಕಲ್ಮೇಶ ಹುನಗುಂದ ಮಂಜುನಾಥ ರವಿ ಮುತ್ತಣ್ಣ ಕದರಿ ಮತ್ತು ಸಮಾಜದ ಪ್ರಮುಖರು ಸೇರಿ ಸನ್ಮಾನ ಮಾಡಿ ಸತ್ಕರಿಸಿದರು.

Leave a Comment

Your email address will not be published. Required fields are marked *

Translate »
Scroll to Top