ಮೃತ ಕುಟುಂಬಸ್ಥರಿಗೆ ಶ್ರೀರಾಮುಲು ಸಾಂತ್ವನ

ಬಳ್ಳಾರಿ: ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕುರುಬೂರು ಬಳಿ  ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರು ಬಳ್ಳಾರಿ ತಾಲ್ಲೂಕಿನ ಸಂಗನಕಲ್ಲು ಗ್ರಾಮದವರಾಗಿದ್ದು, ಈ ಸುದ್ದಿ ತಿಳಿಯುತ್ತಲೇ  ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರನ್ನು ಸಂತೈಸಿದ್ದಾರೆ.

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು ಅವರು, ರಸ್ತೆ ಅಪಘಾತ ನಡೆದ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ. ಪ್ರವಾಸಕ್ಕೆಂದು ತೆರಳಿದ್ದ ಕುಟುಂಬಸ್ಥರು ಇಂದು ಸಂಜೆ ರೈಲಿನಲ್ಲಿ ಬಳ್ಳಾರಿಗೆ ಬರಬೇಕಿತ್ತು. ದುರದೃಷ್ಟವಶಾತ್‍ ಅಪಾಯ ಜರುಗಿ ಸಾವನ್ನಪ್ಪಿದ್ದು,  ದುಖಃಕರವಾದ ಸಂಗತಿಯಾಗಿದೆ. ಆ ಕುಟುಂಬಕ್ಕೆ ಭಗವಂತನು  ಸಾವಿನ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

Leave a Comment

Your email address will not be published. Required fields are marked *

Translate »
Scroll to Top